ಬಿಬಿಎಂಪಿ ವತಿಯಿಂದ ರಾಜರಾಜೇಶ್ವರಿನಗರದಿಂದ ಆರಂಭಗೊಂಡು ಕೆಂಗೇರಿವರೆಗೆ ಬಹುತೇಕ ಪಾದಾಚಾರಿ ಮಾರ್ಗಗಳನ್ನು ನವೀಕರಿಸಿಕೊಂಡು ಬರಲಾಗಿದೆ. ಇದನ್ನೇ ಅನುಕೂಲವಾಗಿ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು ಕಲ್ಲಂಗಡಿ ಹಣ್ಣು, ಎಳನೀರು ವ್ಯಾಪಾರವನ್ನು ದಿನವಿಡೀ ನೆಡೆಸಿಕೊಂಡು ಬರುತ್ತಿದ್ದಾರೆ. ಮತ್ತೆ ಕೆಲವೆಡೆ ತಳ್ಳುವ ಗಾಡಿಯಲ್ಲಿ ಹೊಟೇಲ್, ಕಬ್ಬಿನ ಜ್ಯೂಸ್ ಅಂಗಡಿಗಳನ್ನು ತೆರೆದು ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪಾದಚಾರಿಗಳು ದೂರುತ್ತಾರೆ.