ವೈಜ್ಞಾನಿಕ ಅಧ್ಯಯನ ಅಗತ್ಯ: ವಿದ್ಯಾರತ್ನ ಆರ್.ಎಸ್. ಪಂಚಮುಖಿ ದತ್ತಿ ಉಪನ್ಯಾಸದಲ್ಲಿ ‘ಮೌನ ಕಲ್ಲುಗಳ ಕಥೆಗಳು: ಮಧ್ಯಕಾಲೀನ ಕರ್ನಾಟಕದಲ್ಲಿ ಶಿಲ್ಪ ಕೊರೆಯುವ ತಂತ್ರಗಾರಿಕೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಮಾನವಿಕ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಶ್ರೀಕುಮಾರ್ ಎಂ. ಮೆನನ್, ‘ಮಧ್ಯಪ್ರದೇಶದ ಭೋಜ್ಪುರ್, ಕರ್ನಾಟಕದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಪ್ರದೇಶದಲ್ಲಿಯ ವಾಸ್ತುಶಿಲ್ಪ ಗಮನಿಸಿದಾಗ ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಚಲಿತವಿದ್ದ ವಾಸ್ತುಶಿಲ್ಪದ ವೈಶಿಷ್ಟ್ಯ ಪರಿಚಯವಾಗುತ್ತದೆ. ಈ ಪ್ರದೇಶಗಳಲ್ಲಿ ಲಭ್ಯವಿರುವ ಕಲ್ಲು ಮತ್ತು ಅದರ ಬಳಕೆಯ ತಂತ್ರಗಾರಿಕೆಯ ವೈಜ್ಞಾನಿಕ ಅಧ್ಯಯನ ಅತ್ಯವಶ್ಯಕ’ ಎಂದು ತಿಳಿಸಿದರು.