ಪೀಣ್ಯದ ಕೈಗಾರಿಕೆಯೊಂದಕ್ಕೆ ಪೂರೈಸಲು ಟ್ಯಾಂಕರ್ನಲ್ಲಿ ನೀರು ಕೊಂಡೊಯ್ಯುತ್ತಿರುವುದು. ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಪೀಣ್ಯದ ಕೈಗಾರಿಕೆಯೊಂದಕ್ಕೆ ಟ್ಯಾಂಕರ್ನಲ್ಲಿ ನೀರು ಪೂರೈಸಲಾಗುತ್ತಿದೆ. ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಕಾರ್ಮಿಕರಿಗೆ ಕ್ಯಾನ್ನಲ್ಲಿ ಶುದ್ಧ ನೀರು ಪೂರೈಕೆ. ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಸದ್ಯದಲ್ಲೇ ಸಂಘದ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಜಲಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ರಿಯಾಯಿತಿ ದರದಲ್ಲಿ ಕೈಗಾರಿಕೆಗಳಿಗೆ ಟ್ಯಾಂಕರ್ನಲ್ಲಿ ನೀರು ಪೂರೈಸುವಂತೆ ಮನವಿ ಮಾಡುತ್ತೇವೆ.
–ಎಚ್.ಎಂ.ಆರೀಫ್ ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘಕೈಗಾರಿಕಾ ಪ್ರದೇಶದ ಅಂಕಿಅಂಶಗಳು
12 ಲಕ್ಷ – ಪೀಣ್ಯ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಕಾರ್ಮಿಕರು4 ಲಕ್ಷ – ಮಹಿಳಾ ಕಾರ್ಮಿಕರ ಸಂಖ್ಯೆ 45 ಚದರ ಕಿಲೋ ಮೀಟರ್ – ಪೀಣ್ಯ ಕೈಗಾರಿಕಾ ಪ್ರದೇಶದ ವಿಸ್ತೀರ್ಣ 441 ಎಂಎಲ್ಡಿ – ಕೈಗಾರಿಕೆ ಪ್ರದೇಶದ ನೀರಿನ ಬೇಡಿಕೆ
ಸಂಸ್ಕರಿಸಿದ ನೀರನ್ನು ಕೊಟ್ಟರೆ ಸಾಕು...
ನಮಗೆ ಕಾವೇರಿ ನೀರನ್ನೇ ಕೊಡಿ ಎಂದು ಕೇಳುತ್ತಿಲ್ಲ. ಸಂಸ್ಕರಿಸಿದ ನೀರನ್ನಾದರೂ ಕೊಡಿ. ಅದರೆ ಸಂಸ್ಕರಿಸಿದ ನೀರನ್ನು ಹರಿಸಲು ಪೈಪ್ಲೈನ್ ವ್ಯವಸ್ಥೆಯೇ ಆಗಿಲ್ಲ. ಈ ತಿಂಗಳು ಟ್ಯಾಂಕರ್ ನೀರನ್ನು ಖರೀದಿಸಿ ಕೈಗಾರಿಕೆ ನಡೆಸುತ್ತಿದ್ದೇವೆ. ಆದರೆ ಏಪ್ರಿಲ್ ಹಾಗೂ ಮೇ ತಿಂಗಳ ಬಗ್ಗೆ ಯೋಚಿಸಿದರೆ ಆತಂಕ ಹುಟ್ಟಿಸುತ್ತದೆ. ಮುಂದಿನ ಎರಡು ತಿಂಗಳಲ್ಲಿ ಟ್ಯಾಂಕರ್ ಮಾಲೀಕರಿಗೆ ನೀರು ಲಭಿಸದಿದ್ದರೆ ನಮ್ಮ ಪಾಡೇನು? ನಾನಾ ಕಾರಣಕ್ಕೆ ಕೆಲವು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಈಗ ನೀರು ಕೊಡದಿದ್ದರೆ ನೀರನ್ನೇ ಅಲಂಬಿಸಿರುವ ಕೈಗಾರಿಕೆಗಳನ್ನು ಬಂದ್ ಮಾಡುವ ಸ್ಥಿತಿ ಬರಲಿದೆ ಎಂದು ಸಂಘದ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರು ಏನು ಹೇಳುತ್ತಾರೆ?
ಕೈಗಾರಿಕೆಗಳಿಗೆ ನೀರು ನೀಡಿದರೆ ಕೈಗಾರಿಕೆಗಳ ಅವಲಂಬಿತ ಕಾರ್ಮಿಕರ ಬದುಕೂ ಉಳಿಯಲಿದೆ. – ಸುಜಾತಾ ಕಾರ್ಮಿಕ ಮಹಿಳೆ ರಾಜ್ಯದಲ್ಲಿನ ಬರದ ಕಾರಣದಿಂದ ಪೀಣ್ಯ ಪ್ರದೇಶಕ್ಕೆ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯೂ ನೀರಿನ ವ್ಯವಸ್ಥೆ ಸರಿಯಿಲ್ಲದೇ ಕಾರ್ಮಿಕರು ಪರಿತಪಿಸುತ್ತಿದ್ದಾರೆ. – ಸುಜಿತಾ ರಾವ್ ಆರ್ಕೆ ಎಂಜಿನಿಯರ್ ವರ್ಕ್ಸ್