ಜ್ಞಾನಭಾರತಿ ಆವರಣದಲ್ಲಿ ಟೆಂಡರ್ ಕರೆಯದೆ ಈ ಕಾಮಗಾರಿ ನಿರ್ವಹಿಸಲು ಯತ್ನಿಸಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಟೆಂಡರ್ ಕರೆದೇ ಕಾಮಗಾರಿ ನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಟೆಂಡರ್ ಪ್ರಕ್ರಿಯೆ ನಡೆಸುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದರು. ಕೊಮ್ಮಘಟ್ಟಕ್ಕೆ ತೆರಳಲು ಜ್ಞಾನಭಾರತಿ ಆವರಣದಲ್ಲೇ ಹಾದು ಹೋದರು. ಅದಕ್ಕಾಗಿ ಡಾಂಬರ್ ರಸ್ತೆಯನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು.