ಸ್ಮಶಾನದ ಮುಂದೆ ಫಲಕ ನಿಲ್ಲಿಸಿದ್ದ: ‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಸ್ಮಶಾನದಲ್ಲಿ ಗುಂಡಿ ತೂಡುವ ಕೆಲಸಕ್ಕೆ ಬೇಡಿಕೆ ಬಂದಿತ್ತು. ಅದೇ ಕಾರಣಕ್ಕೆ ಪಿರ್ದೋಸ್, ಪ್ರತಿ ಗುಂಡಿಗೆ ಹೆಚ್ಚು ಹಣ ಪಡೆಯುತ್ತಿದ್ದರು. ಅದು ಗೊತ್ತಾಗುತ್ತಿದ್ದಂತೆ ಮೌಲಾನ್ ಪಾಷಾ, ಪಿರ್ದೋಸ್ ಜೊತೆ ಗಲಾಟೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೊಡಲು ಒಪ್ಪದಿದ್ದಕ್ಕೆ, ಸ್ಮಶಾನ ಎದುರು ಫಲಕ ಹಾಕಿದ್ದ. ‘ಗುಂಡಿ ತೆಗೆಯಲು ₹ 1,500 ಮಾತ್ರ ನೀಡಿ. ಹೆಚ್ಚು ಹಣ ಕೇಳಿದರೆ ನನಗೆ ದೂರು ನೀಡಿ’ ಎಂದು ತನ್ನ ಮೊಬೈಲ್ ನಂಬರ್ ಹಾಕಿಸಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.