ಏನಿದು ಪ್ರಕರಣ?: 2018–19ನೇ ಸಾಲಿನಲ್ಲಿ ಮುಂದಿನ ಮೂರು ವರ್ಷಗಳಿಗೆ ವನಮಾಲ ಅವರು ಸಂಘದ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದರು. ಅಧಿಕಾರಾವಧಿಯು 2021ಕ್ಕೆ ಮುಗಿ ದಿದ್ದು, ಕೊರೊನಾ ಇದ್ದ ಕಾರಣ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಆಗಲಿಲ್ಲ ಎನ್ನುವ ಕಾರಣ ನೀಡಿ, ಇನ್ನೂ ಒಂದು ವರ್ಷ ಅವಧಿ ವಿಸ್ತರಿಸುವಂತೆ ವನಮಾಲ ಅವರು ಸಲಹಾ ಸಮಿತಿಗೆ ಮನವಿ ಮಾಡಿದರು. ಅವರ ಮನವಿಯನ್ನು ಒಪ್ಪಿ, ಒಂದು ವರ್ಷಕ್ಕೆ ಅವರ ಅವಧಿಯನ್ನು ವಿಸ್ತರಿಸಲಾಯಿತು. ನಂತರ, 2022ರ ಏಪ್ರಿಲ್ 17ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಇನ್ನೊಂದು ಅವಧಿಗೂ ಇದೇ ತಂಡ ಮುಂದುವರಿಯುವುದಾಗಿ ವನಮಾಲ ಹೇಳಿದರು. ಇದನ್ನು ಹಲವು ಸದಸ್ಯರು ವಿರೋಧಿಸಿ, ಚುನಾವಣೆ ಆಗಲೇಬೇಕು ಎಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದು ಚುನಾವಣೆ ನಡೆಸುವುದಾಗಿ ಹೇಳಿದ ವನಮಾಲ ಅವರು ನಂತರ ಕ್ರಮ ಕೈಗೊಳ್ಳಲಿಲ್ಲ ಎಂದು ಸಂಘದ ಹಲವು ಸದಸ್ಯರು ಆರೋಪಿಸಿದ್ದಾರೆ.