<p><strong>ಬೆಂಗಳೂರು:</strong> ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಸೆ.29ರಂದು ನಗರದಲ್ಲಿ ‘ಹೃದಯದ ಆರೋಗ್ಯಕ್ಕಾಗಿ ನಾಲ್ಕು ಹೆಜ್ಜೆ’ ಎಂಬ ಧ್ಯೇಯದೊಂದಿಗೆ ವಾಕಥಾನ್ ಹಮ್ಮಿಕೊಂಡಿದೆ. </p>.<p>ರಾಜಾಜಿನಗರದ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಆವರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಬೆಳಗ್ಗೆ 8ಕ್ಕೆ ವಾಕಥಾನ್ಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟಿಸಲಿದ್ದಾರೆ. </p>.<p>ಸಚಿವರೊಂದಿಗೆ ಶಾಸಕ ಗೋಪಾಲಯ್ಯ,ಜೆಸ್ಸಿ ಮರ್ಲಿನ್, ಡಾ.ಶ್ರೀಧರ್,ಯೋಗೇಶ್ ಪಚಿಶಿಯಾ,ಬಿ.ಜಿ. ಆವಟಿ, ಸವಿತಾಲಕ್ಷ್ಮಿ ಬೆಳಗಲಿ, ಎಂ.ಪಿ. ವೀಣಾ ಮಹಾಂತೇಶ್ ಅವರೂ ಹೆಜ್ಜೆ ಹಾಕಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಮರಳಿ ಸೇಂಟ್ ಥೆರೆಸಾ ಆಸ್ಪತ್ರೆಗೆ ತೆರಳಲಿದೆ. </p>.<p>ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು, ತಥಾಗತ್ ಆಸ್ಪತ್ರೆಯ ಸಿಬ್ಬಂದಿ ವಾಕಥಾನ್ನಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ತಥಾಗತ್ ಹಾರ್ಟ್ ಕೇರ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ್ ಚರಂತಿಮಠ ಹಾಗೂ ನಿರ್ದೇಶಕ ಡಾ.ಶ್ರೀನಿವಾಸ್ ವೇಲು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಸೆ.29ರಂದು ನಗರದಲ್ಲಿ ‘ಹೃದಯದ ಆರೋಗ್ಯಕ್ಕಾಗಿ ನಾಲ್ಕು ಹೆಜ್ಜೆ’ ಎಂಬ ಧ್ಯೇಯದೊಂದಿಗೆ ವಾಕಥಾನ್ ಹಮ್ಮಿಕೊಂಡಿದೆ. </p>.<p>ರಾಜಾಜಿನಗರದ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಆವರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಬೆಳಗ್ಗೆ 8ಕ್ಕೆ ವಾಕಥಾನ್ಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟಿಸಲಿದ್ದಾರೆ. </p>.<p>ಸಚಿವರೊಂದಿಗೆ ಶಾಸಕ ಗೋಪಾಲಯ್ಯ,ಜೆಸ್ಸಿ ಮರ್ಲಿನ್, ಡಾ.ಶ್ರೀಧರ್,ಯೋಗೇಶ್ ಪಚಿಶಿಯಾ,ಬಿ.ಜಿ. ಆವಟಿ, ಸವಿತಾಲಕ್ಷ್ಮಿ ಬೆಳಗಲಿ, ಎಂ.ಪಿ. ವೀಣಾ ಮಹಾಂತೇಶ್ ಅವರೂ ಹೆಜ್ಜೆ ಹಾಕಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಮರಳಿ ಸೇಂಟ್ ಥೆರೆಸಾ ಆಸ್ಪತ್ರೆಗೆ ತೆರಳಲಿದೆ. </p>.<p>ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು, ತಥಾಗತ್ ಆಸ್ಪತ್ರೆಯ ಸಿಬ್ಬಂದಿ ವಾಕಥಾನ್ನಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ತಥಾಗತ್ ಹಾರ್ಟ್ ಕೇರ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ್ ಚರಂತಿಮಠ ಹಾಗೂ ನಿರ್ದೇಶಕ ಡಾ.ಶ್ರೀನಿವಾಸ್ ವೇಲು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>