<p><strong>ಯಲಹಂಕ:</strong> ಕ್ಷೇತ್ರದ ಸಮಗ್ರ ಇತಿಹಾಸವನ್ನು ಪರಿಚಯಿಸುವ ‘ಯಲಹಂಕ ಕ್ಷೇತ್ರದರ್ಶನ’ ಮಹಾಸಂಪುಟವನ್ನು ಹೊರತರುವ ಯೋಜನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಮಿನಿವಿಧಾನಸೌಧದಲ್ಲಿ ಚಾಲನೆ ನೀಡಿದರು.</p>.<p>‘ಯಲಹಂಕ ವಿಧಾನಸಭಾ ಕ್ಷೇತ್ರವು ಹೆಸರಘಟ್ಟ, ದಾಸನಪುರ ಹಾಗೂ ಯಲಹಂಕ ಹೋಬಳಿಗಳನ್ನು ಹೊಂದಿದ್ದು, 202 ಗ್ರಾಮಗಳನ್ನು ಒಳಗೊಂಡಿದೆ. ಈ ಎಲ್ಲ ಹಳ್ಳಿಗಳ ಇತಿಹಾಸ, ಪರಂಪರೆ, ಸಾಧನೆ, ಕೊಡುಗೆ, ಜನಸಂಖ್ಯೆ ಮತ್ತಿತರ ವಿಷಯಗಳನ್ನು ಈ ಸಂಪುಟದಲ್ಲಿ ದಾಖಲಿಸಲಾಗುತ್ತದೆ. ಕ್ಷೇತ್ರದ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಂಪುಟವನ್ನು ಹೊರತರಲಾಗುವುದು’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ರಘುಮೂರ್ತಿ, ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್, ಬಿಬಿಎಂಪಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಎಸಿಪಿ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.</p>.<p class="Subhead"><strong>ಜಾಗೃತಿ ಜಾಥಾ: </strong>ಮಾಸ್ಕ್ ದಿನದ ಅಂಗವಾಗಿ ಮಿನಿವಿಧಾನಸೌಧದಿಂದ ಆರಂಭವಾದ ಜಾಗೃತಿ ಜಾಥಾಗೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.</p>.<p class="Subhead">ಶೇಷಾದ್ರಿಪುರ ಕಾಲೇಜಿನವರೆಗೆ ಸಾಗಿದ ಜಾಥಾದಲ್ಲಿ ಜನಪ್ರತಿನಿಧಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿಯ ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ:</strong> ಕ್ಷೇತ್ರದ ಸಮಗ್ರ ಇತಿಹಾಸವನ್ನು ಪರಿಚಯಿಸುವ ‘ಯಲಹಂಕ ಕ್ಷೇತ್ರದರ್ಶನ’ ಮಹಾಸಂಪುಟವನ್ನು ಹೊರತರುವ ಯೋಜನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಮಿನಿವಿಧಾನಸೌಧದಲ್ಲಿ ಚಾಲನೆ ನೀಡಿದರು.</p>.<p>‘ಯಲಹಂಕ ವಿಧಾನಸಭಾ ಕ್ಷೇತ್ರವು ಹೆಸರಘಟ್ಟ, ದಾಸನಪುರ ಹಾಗೂ ಯಲಹಂಕ ಹೋಬಳಿಗಳನ್ನು ಹೊಂದಿದ್ದು, 202 ಗ್ರಾಮಗಳನ್ನು ಒಳಗೊಂಡಿದೆ. ಈ ಎಲ್ಲ ಹಳ್ಳಿಗಳ ಇತಿಹಾಸ, ಪರಂಪರೆ, ಸಾಧನೆ, ಕೊಡುಗೆ, ಜನಸಂಖ್ಯೆ ಮತ್ತಿತರ ವಿಷಯಗಳನ್ನು ಈ ಸಂಪುಟದಲ್ಲಿ ದಾಖಲಿಸಲಾಗುತ್ತದೆ. ಕ್ಷೇತ್ರದ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಂಪುಟವನ್ನು ಹೊರತರಲಾಗುವುದು’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ರಘುಮೂರ್ತಿ, ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್, ಬಿಬಿಎಂಪಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಎಸಿಪಿ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.</p>.<p class="Subhead"><strong>ಜಾಗೃತಿ ಜಾಥಾ: </strong>ಮಾಸ್ಕ್ ದಿನದ ಅಂಗವಾಗಿ ಮಿನಿವಿಧಾನಸೌಧದಿಂದ ಆರಂಭವಾದ ಜಾಗೃತಿ ಜಾಥಾಗೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.</p>.<p class="Subhead">ಶೇಷಾದ್ರಿಪುರ ಕಾಲೇಜಿನವರೆಗೆ ಸಾಗಿದ ಜಾಥಾದಲ್ಲಿ ಜನಪ್ರತಿನಿಧಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿಯ ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>