<p><strong>ಬೆಂಗಳೂರು</strong>: ಜನ ಸಾಮಾನ್ಯರ ವೇದಿಕೆ ವತಿಯಿಂದ ಅ. 2ರಂದು ಬೀದರ್ನಲ್ಲಿ ಪ್ರಾರಂಭಗೊಂಡ ಯುವ ಪರಿವರ್ತನೆ ಯಾತ್ರೆ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಂಡಿತು.</p>.<p>ಯಾತ್ರೆಯ ಪ್ರಧಾನ ಸಂಚಾಲಕ ಮುಧೋಳ ಯಲ್ಲಪ್ಪ ಹೆಗಡೆ ಮಾತನಾಡಿ, ‘ರಾಜ್ಯದಲ್ಲಿ ಬಿಡಿ ಬಿಡಿಯಾಗಿ ನಡೆಯುತ್ತಿರುವ ರೈತ ಹೋರಾಟಗಳು ಮತ್ತು ಯುವ ಜನರ ಹೋರಾಟಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ. ಆಗ ಮಾತ್ರ ಇಡೀ ಕನ್ನಡನಾಡಿನ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು. </p>.<p>‘ಇನ್ಸೈಟ್ಸ್ ಐಎಎಸ್’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮಾತನಾಡಿ, ‘ನಿರಂತರತೆ ಮಾತ್ರ ಯಾವುದೇ ಚಳವಳಿಯನ್ನು ಯಶಸ್ಸಿನ ಕಡೆ ಕೊಂಡೊಯ್ಯುತ್ತದೆ’ ಎಂದು ತಿಳಿಸಿದರು.</p>.<p>ದ್ರಾವಿಡ ಕನ್ನಡಿಗರು ಸಂಘಟನೆಯ ಮಂಡ್ಯ ಅಬಿ ಒಕ್ಕಲಿಗ ಮಾತನಾಡಿ, ‘ಉತ್ತರ ಕರ್ನಾಟಕ ಜನ ಜೀವನ ದರ್ಶನವಾಗಿ ಈ ಯಾತ್ರೆಯಿಂದ ಮನ ಕಲಕಿದೆ. ಸಮಗ್ರ ಕನ್ನಡನಾಡು ನುಡಿ ಅಭಿವೃದ್ಧಿ ಆಗಬೇಕೆಂದರೆ ಹಳೇ ಮೈಸೂರು ಭಾಗದ ಎಲ್ಲ ವೈಚಾರಿಕ ಹೋರಾಟಗಾರರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲಬೇಕಿದೆ’ ಎಂದರು.</p>.<p> ಜನ ಸಾಮಾನ್ಯರ ವೇದಿಕೆಯ ಶಿವಲಿಂಗ ಬಿದರಿ, ಮನು ವಿಶ್ವಕರ್ಮ, ಶಂಕರ್ ಬಾಗಲಕೋಟೆ, ಲೀಲಾ ಶಿವಮೊಗ್ಗ, ಭೂಮಿಕ ತರಿಕೆರೆ, ಆನಂದ್ ಬೌದ್ಧ ಬೆಂಗಳೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜನ ಸಾಮಾನ್ಯರ ವೇದಿಕೆ ವತಿಯಿಂದ ಅ. 2ರಂದು ಬೀದರ್ನಲ್ಲಿ ಪ್ರಾರಂಭಗೊಂಡ ಯುವ ಪರಿವರ್ತನೆ ಯಾತ್ರೆ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಂಡಿತು.</p>.<p>ಯಾತ್ರೆಯ ಪ್ರಧಾನ ಸಂಚಾಲಕ ಮುಧೋಳ ಯಲ್ಲಪ್ಪ ಹೆಗಡೆ ಮಾತನಾಡಿ, ‘ರಾಜ್ಯದಲ್ಲಿ ಬಿಡಿ ಬಿಡಿಯಾಗಿ ನಡೆಯುತ್ತಿರುವ ರೈತ ಹೋರಾಟಗಳು ಮತ್ತು ಯುವ ಜನರ ಹೋರಾಟಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ. ಆಗ ಮಾತ್ರ ಇಡೀ ಕನ್ನಡನಾಡಿನ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು. </p>.<p>‘ಇನ್ಸೈಟ್ಸ್ ಐಎಎಸ್’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮಾತನಾಡಿ, ‘ನಿರಂತರತೆ ಮಾತ್ರ ಯಾವುದೇ ಚಳವಳಿಯನ್ನು ಯಶಸ್ಸಿನ ಕಡೆ ಕೊಂಡೊಯ್ಯುತ್ತದೆ’ ಎಂದು ತಿಳಿಸಿದರು.</p>.<p>ದ್ರಾವಿಡ ಕನ್ನಡಿಗರು ಸಂಘಟನೆಯ ಮಂಡ್ಯ ಅಬಿ ಒಕ್ಕಲಿಗ ಮಾತನಾಡಿ, ‘ಉತ್ತರ ಕರ್ನಾಟಕ ಜನ ಜೀವನ ದರ್ಶನವಾಗಿ ಈ ಯಾತ್ರೆಯಿಂದ ಮನ ಕಲಕಿದೆ. ಸಮಗ್ರ ಕನ್ನಡನಾಡು ನುಡಿ ಅಭಿವೃದ್ಧಿ ಆಗಬೇಕೆಂದರೆ ಹಳೇ ಮೈಸೂರು ಭಾಗದ ಎಲ್ಲ ವೈಚಾರಿಕ ಹೋರಾಟಗಾರರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲಬೇಕಿದೆ’ ಎಂದರು.</p>.<p> ಜನ ಸಾಮಾನ್ಯರ ವೇದಿಕೆಯ ಶಿವಲಿಂಗ ಬಿದರಿ, ಮನು ವಿಶ್ವಕರ್ಮ, ಶಂಕರ್ ಬಾಗಲಕೋಟೆ, ಲೀಲಾ ಶಿವಮೊಗ್ಗ, ಭೂಮಿಕ ತರಿಕೆರೆ, ಆನಂದ್ ಬೌದ್ಧ ಬೆಂಗಳೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>