<p><strong>ಬೆಂಗಳೂರು: </strong>ನಗರ ಸಂಚಾರ ಪೊಲೀಸರಿಗೆ ಉಚಿತ ನೇತ್ರ ತಪಾಸಣೆ ನಡೆಸುವ `ಪೊಲೀಸ್ ವಿಷನ್ ಅವರ್ ಮಿಷನ್~ ಕಾರ್ಯಕ್ರಮಕ್ಕೆ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.<br /> <br /> ಅಶೋಕನಗರದ ಕ್ಯಾಸಲ್ ಸ್ಟ್ರೀಟ್ನಲ್ಲಿರುವ ನಾರಾಯಣ ನೇತ್ರಾಲಯ-3 ರಲ್ಲಿ ನಡೆದ ಕಾರ್ಯಕ್ರಮಕ್ಕೆ ಪೂರ್ವ ಸಂಚಾರ ವಿಭಾಗದ ಡಿಸಿಪಿ ಎನ್. ಮುತ್ತಣ್ಣ ಚಾಲನೆ ನೀಡಿದರು.<br /> <br /> `ಸಂಚಾರ ಪೊಲೀಸರು ಹೆಚ್ಚಿನ ಸಮಯ ರಸ್ತೆಗಳಲ್ಲಿ ಕಳೆಯುತ್ತಾರೆ. ಸುಮಾರು ಹನ್ನೆರಡು ಗಂಟೆ ಕಾಲ ಕೆಲಸ ಮಾಡುವ ಅವರು ದೂಳು, ಹೊಗೆಯಿಂದಾಗಿ ಕಣ್ಣಿನ ತೊಂದರೆ ಅನುಭವಿಸುತ್ತಾರೆ. ಕೆಲವರು ರಕ್ತದೊತ್ತಡ ಮಧುಮೇಹದಿಂದಲೂ ಬಳಲುತ್ತಾರೆ~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಹೇಳಿದರು.<br /> <br /> `ಪೊಲೀಸರಿಗೆ ತಪಾಸಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿರುವ ನಮ್ಮ ಮೂರು ಆಸ್ಪತ್ರೆಗಳಲ್ಲಿ ಯಾವುದಾದರೂ ಒಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಆಯ್ದ ಪೊಲೀಸ್ ಠಾಣೆ ಮತ್ತು ಸ್ಥಳಗಳಲ್ಲಿಯೂ ಶಿಬಿರ ಆಯೋಜಿಸಲಾಗುತ್ತದೆ. ನೇತ್ರದಾನ ಮಾಡುವಂತೆಯೂ ಸಿಬ್ಬಂದಿಯನ್ನು ಕೋರಲಾಗುತ್ತದೆ~ ಎಂದರು. ಮುನ್ನೂರು ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರ ಸಂಚಾರ ಪೊಲೀಸರಿಗೆ ಉಚಿತ ನೇತ್ರ ತಪಾಸಣೆ ನಡೆಸುವ `ಪೊಲೀಸ್ ವಿಷನ್ ಅವರ್ ಮಿಷನ್~ ಕಾರ್ಯಕ್ರಮಕ್ಕೆ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.<br /> <br /> ಅಶೋಕನಗರದ ಕ್ಯಾಸಲ್ ಸ್ಟ್ರೀಟ್ನಲ್ಲಿರುವ ನಾರಾಯಣ ನೇತ್ರಾಲಯ-3 ರಲ್ಲಿ ನಡೆದ ಕಾರ್ಯಕ್ರಮಕ್ಕೆ ಪೂರ್ವ ಸಂಚಾರ ವಿಭಾಗದ ಡಿಸಿಪಿ ಎನ್. ಮುತ್ತಣ್ಣ ಚಾಲನೆ ನೀಡಿದರು.<br /> <br /> `ಸಂಚಾರ ಪೊಲೀಸರು ಹೆಚ್ಚಿನ ಸಮಯ ರಸ್ತೆಗಳಲ್ಲಿ ಕಳೆಯುತ್ತಾರೆ. ಸುಮಾರು ಹನ್ನೆರಡು ಗಂಟೆ ಕಾಲ ಕೆಲಸ ಮಾಡುವ ಅವರು ದೂಳು, ಹೊಗೆಯಿಂದಾಗಿ ಕಣ್ಣಿನ ತೊಂದರೆ ಅನುಭವಿಸುತ್ತಾರೆ. ಕೆಲವರು ರಕ್ತದೊತ್ತಡ ಮಧುಮೇಹದಿಂದಲೂ ಬಳಲುತ್ತಾರೆ~ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಹೇಳಿದರು.<br /> <br /> `ಪೊಲೀಸರಿಗೆ ತಪಾಸಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿರುವ ನಮ್ಮ ಮೂರು ಆಸ್ಪತ್ರೆಗಳಲ್ಲಿ ಯಾವುದಾದರೂ ಒಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಆಯ್ದ ಪೊಲೀಸ್ ಠಾಣೆ ಮತ್ತು ಸ್ಥಳಗಳಲ್ಲಿಯೂ ಶಿಬಿರ ಆಯೋಜಿಸಲಾಗುತ್ತದೆ. ನೇತ್ರದಾನ ಮಾಡುವಂತೆಯೂ ಸಿಬ್ಬಂದಿಯನ್ನು ಕೋರಲಾಗುತ್ತದೆ~ ಎಂದರು. ಮುನ್ನೂರು ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>