<p><strong>ಬಸವಕಲ್ಯಾಣ: </strong>ಇಲ್ಲಿನ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜೆಇ ಸುರೇಶ ಮೋರೆ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿದ್ದು, ಅವರ ಬಳಿ ₹1.65 ಕೋಟಿಗೂ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ನ್ಯಾಯಯುತವಾಗಿ ಅವರ ಬಳಿ ₹45 ಲಕ್ಷ ಬೆಲೆ ಬಾಳುವಷ್ಟು ಮಾತ್ರ ಆಸ್ತಿ ಇರಬೇಕಾಗಿತ್ತು.</p>.<p>ಎಸಿಬಿ ಕಲಬುರ್ಗಿ ಎಸ್ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.</p>.<p>ಬಸವಕಲ್ಯಾಣ ನಗರದ ಶಿವಾಜಿ ನಗರದಲ್ಲಿನ ಮನೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಚೇರಿ, ಅವರ ಸ್ವಂತ ಊರು ಮೆಹಕರ್ದಲ್ಲಿನ ಮನೆ, ಅಲ್ಲಿನ ಪೆಟ್ರೋಲ್ ಪಂಪ್ ಈ ನಾಲ್ಕು ಸ್ಥಳಗಳಲ್ಲಿ ಪ್ರತ್ಯೇಕ ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಲಾಯಿತು.</p>.<p>ಎಸಿಬಿ ಡಿವೈಎಸ್ಪಿ ಹಣಮಂತರಾಯ, ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ, ಶರಣಬಸಪ್ಪ ಕೊಡ್ಲಾ, ಸಿಬ್ಬಂದಿ ನಿರಂಜನ ಪಾಟೀಲ, ಶ್ರೀಕಾಂತ, ಮರೆಪ್ಪ, ಕಿಶೋರ, ಅನಿಲ, ಸರಸ್ವತಿ ದಾಳಿಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ಇಲ್ಲಿನ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜೆಇ ಸುರೇಶ ಮೋರೆ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿದ್ದು, ಅವರ ಬಳಿ ₹1.65 ಕೋಟಿಗೂ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ನ್ಯಾಯಯುತವಾಗಿ ಅವರ ಬಳಿ ₹45 ಲಕ್ಷ ಬೆಲೆ ಬಾಳುವಷ್ಟು ಮಾತ್ರ ಆಸ್ತಿ ಇರಬೇಕಾಗಿತ್ತು.</p>.<p>ಎಸಿಬಿ ಕಲಬುರ್ಗಿ ಎಸ್ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.</p>.<p>ಬಸವಕಲ್ಯಾಣ ನಗರದ ಶಿವಾಜಿ ನಗರದಲ್ಲಿನ ಮನೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಚೇರಿ, ಅವರ ಸ್ವಂತ ಊರು ಮೆಹಕರ್ದಲ್ಲಿನ ಮನೆ, ಅಲ್ಲಿನ ಪೆಟ್ರೋಲ್ ಪಂಪ್ ಈ ನಾಲ್ಕು ಸ್ಥಳಗಳಲ್ಲಿ ಪ್ರತ್ಯೇಕ ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಲಾಯಿತು.</p>.<p>ಎಸಿಬಿ ಡಿವೈಎಸ್ಪಿ ಹಣಮಂತರಾಯ, ಸಬ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ, ಶರಣಬಸಪ್ಪ ಕೊಡ್ಲಾ, ಸಿಬ್ಬಂದಿ ನಿರಂಜನ ಪಾಟೀಲ, ಶ್ರೀಕಾಂತ, ಮರೆಪ್ಪ, ಕಿಶೋರ, ಅನಿಲ, ಸರಸ್ವತಿ ದಾಳಿಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>