ಬೀದರ್: ಭಾರತೀಯ ವಾಯು ಸೇನಾ ತರಬೇತಿ ವಿಭಾಗದ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಡಿ.ಮಾಥೂರ್ ಇಲ್ಲಿಯ ವಾಯು ಪಡೆ ತರಬೇತಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದರು.
ಕೇಂದ್ರದ ಮುಖ್ಯಸ್ಥ ಏರ್ ಕಮಾಡೋರ್ ನಿಖಿಲೇಶ್ ಗೌತಮ್ ಅವರು ಕೇಂದ್ರದ ನಿರ್ವಹಣೆ ಹಾಗೂ ಆಡಳಿತ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
ಪೈಲಟ್ ಹಾಗೂ ಶಸ್ತ್ರಾಸ್ತ್ರ ಬಳಕೆತರಬೇತಿ ಮುಕ್ತಾಯಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭಕೋರಿದರು.
ವಾಯು ಪಡೆ ಅಧಿಕಾರಿ ಸಮರ್ಥ ಶುಕ್ಲ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು, 52 ವಾರಗಳ ತರಬೇತಿ ಪೂರೈಸಿದೆ 18 ಪೈಲಟ್ ಹಾಗೂ ಯುದ್ಧ ವಿಮಾನ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆದ ಇಬ್ಬರಿಗೆ ಪ್ರಮಾಣಪತ್ರ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.