<p><strong>ಬಸವಕಲ್ಯಾಣ:</strong> ನವೆಂಬರ್ 29 ಮತ್ತು 30ರಂದು ನಡೆಯುವ 46ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದ ಪ್ರಚಾರಕ್ಕಾಗಿ ಸೋಮವಾರ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಸಂಸದ ಸಾಗರ ಖಂಡ್ರೆ ಜಾಥಾಕ್ಕೆ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿ, ‘ಬಸವಾದಿ ಶರಣರ ತತ್ವದ ಪ್ರಚಾರಕ್ಕೆ ಹಮ್ಮಿಕೊಂಡಿರುವ ಅನುಭವ ಮಂಟಪ ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು. ಪರಿಸರ ಮಾಲಿನ್ಯ ತಡೆಗೆ ವಾಹನದ ಬದಲಾಗಿ ಸೈಕಲ್ ಬಳಸಿದರೆ ಉತ್ತಮ’ ಎಂದು ಹೇಳಿದರು.</p>.<p>ಅನುಭವ ಮಂಟಪ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಅನ್ಯದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿನ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಕಚೇರಿಗೆ ಸೈಕಲ್ ಮೇಲೆಯೇ ಹೋಗುವುದು ಗೊತ್ತಾಯಿತು. ಅದರಂತೆ ಇಲ್ಲಿಯೂ ವಾಹನಗಳ ಬಳಕೆ ಕಡಿಮೆ ಆಗಬೇಕು' ಎಂದು ಹೇಳಿದರು.</p>.<p>ಶಾಸಕ ಶರಣು ಸಲಗರ, ಲಕ್ಷ್ಮಿಕಾಂತ ಜ್ಯಾಂತೆ, ದೀಪಕ ಠಮಕೆ, ನವಲಿಂಗ ಪಾಟೀಲ ಮಾತನಾಡಿದರು. ಮುಖ್ಯ ರಸ್ತೆಯ ಮೂಲಕ ಅನುಭವ ಮಂಟಪದವರೆಗೆ 4 ಕಿ.ಮೀ. ನಷ್ಟು ಜಾಥಾ ನಡೆಯಿತು. ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ನವೆಂಬರ್ 29 ಮತ್ತು 30ರಂದು ನಡೆಯುವ 46ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದ ಪ್ರಚಾರಕ್ಕಾಗಿ ಸೋಮವಾರ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಸಂಸದ ಸಾಗರ ಖಂಡ್ರೆ ಜಾಥಾಕ್ಕೆ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿ, ‘ಬಸವಾದಿ ಶರಣರ ತತ್ವದ ಪ್ರಚಾರಕ್ಕೆ ಹಮ್ಮಿಕೊಂಡಿರುವ ಅನುಭವ ಮಂಟಪ ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು. ಪರಿಸರ ಮಾಲಿನ್ಯ ತಡೆಗೆ ವಾಹನದ ಬದಲಾಗಿ ಸೈಕಲ್ ಬಳಸಿದರೆ ಉತ್ತಮ’ ಎಂದು ಹೇಳಿದರು.</p>.<p>ಅನುಭವ ಮಂಟಪ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಅನ್ಯದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿನ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಕಚೇರಿಗೆ ಸೈಕಲ್ ಮೇಲೆಯೇ ಹೋಗುವುದು ಗೊತ್ತಾಯಿತು. ಅದರಂತೆ ಇಲ್ಲಿಯೂ ವಾಹನಗಳ ಬಳಕೆ ಕಡಿಮೆ ಆಗಬೇಕು' ಎಂದು ಹೇಳಿದರು.</p>.<p>ಶಾಸಕ ಶರಣು ಸಲಗರ, ಲಕ್ಷ್ಮಿಕಾಂತ ಜ್ಯಾಂತೆ, ದೀಪಕ ಠಮಕೆ, ನವಲಿಂಗ ಪಾಟೀಲ ಮಾತನಾಡಿದರು. ಮುಖ್ಯ ರಸ್ತೆಯ ಮೂಲಕ ಅನುಭವ ಮಂಟಪದವರೆಗೆ 4 ಕಿ.ಮೀ. ನಷ್ಟು ಜಾಥಾ ನಡೆಯಿತು. ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>