ಈ ಮೂವರು ಆರೋಪಿಗಳು ಈ ಜ್ಯುವೆಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕರು ಆಭರಣಗಳನ್ನು ತಯಾರಿಸಿ ಕೊಡುವಂತೆ 19 ತೊಲಾ 5 ಗ್ರಾಂ ಬಂಗಾರ ನೀಡಿದ್ದರು. ಆದರೆ ಆರೋಪಿಗಳು ಆಭರಣಗಳು ತಯಾರಿಸಿ ಹಿಂದಿರುಗಿಸದೇ ದೋಚಿಕೊಂಡು ಪರಾರಿಯಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಎಎಸ್ಪಿ ಶಿವಾಂಶು ರಜಪೂತ, ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ, ಅಪರಾಧ ಪಿಎಸ್ಐ ಸುರೇಶ, ಸಿಬ್ಬಂದಿ ಭಗವಾನ ಬಿರಾದಾರ, ಶಿವಾನಂದ ಹಾಗೂ ಬಾಲಾಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.