ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರ ಕಳವು: ಆರೋಪಿ ಬಂಧನ

Last Updated 28 ಸೆಪ್ಟೆಂಬರ್ 2022, 5:23 IST
ಅಕ್ಷರ ಗಾತ್ರ

ಹುಮನಾಬಾದ್: ಜುಲೈ 20ರಂದು ಪಟ್ಟಣದ ಸಾಗರ ವರ್ಮಾ ಅವರಿಗೆ ಸೇರಿದ ಆರ್.ಕೆ. ಜ್ಯುವೆಲರಿಯಲ್ಲಿ 19 ತೊಲಾ 5 ಗ್ರಾಂ ಬಂಗಾರ ದೋಚಿಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ದಿಯೋನ ಅಕ್ತರ ಬಂಧಿತ. ಬಂಧಿತನಿಂದ 8 ತೊಲಾ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಬಿವಾಸ ಮಲಿಕ್ ಮತ್ತು ಬರನ ಬೇರಾ ಪತ್ತೆಗಾಗಿ ಶೋಧ ನಡೆದಿದೆ.

ಈ ಮೂವರು ಆರೋಪಿಗಳು ಈ ಜ್ಯುವೆಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕರು ಆಭರಣಗಳನ್ನು ತಯಾರಿಸಿ ಕೊಡುವಂತೆ 19 ತೊಲಾ 5 ಗ್ರಾಂ ಬಂಗಾರ ನೀಡಿದ್ದರು. ಆದರೆ ಆರೋಪಿಗಳು ಆಭರಣಗಳು ತಯಾರಿಸಿ ಹಿಂದಿರುಗಿಸದೇ ದೋಚಿಕೊಂಡು ಪರಾರಿಯಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಎಎಸ್ಪಿ ಶಿವಾಂಶು ರಜಪೂತ, ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ, ಅಪರಾಧ ಪಿಎಸ್ಐ ಸುರೇಶ, ಸಿಬ್ಬಂದಿ ಭಗವಾನ ಬಿರಾದಾರ, ಶಿವಾನಂದ ಹಾಗೂ ಬಾಲಾಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT