ಠಾಣೆಗೆ ಪ್ರತಿ ದೂರು ನೀಡಿರುವ ಅಬ್ರಾರ್ ಹುಸೇನ್, ‘ಸಾಗರ ದಂಡೋತಿ, ಚಮನಸಾಬ್ ಹೊಸಮನಿ, ನಾಗಪ್ಪ ಮತ್ತು ಮಲ್ಲನಗೌಡ ಅವರು ಬಂಗ್ಲೆಯ ಹಿಂಬದಿ ಆವರಣ ಗೋಡೆ ಏರಿ ಬಂದು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಹೀಗೆ ಅನಧಿಕೃತವಾಗಿ ಇಲ್ಲೇಕೆ ಚಿತ್ರೀಕರಣ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ.