<p><strong>ಭಾಲ್ಕಿ:</strong> ಗ್ರಾಮೀಣ ಭಾರತದ ಸೌಹಾರ್ದ ಮತ್ತು ಆರ್ಥಿಕ ಸುಭದ್ರತೆಯಲ್ಲಿ ಜಾತ್ರೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಗೋರ್ಟಾದ ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮದ ಧರ್ಮ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>ಹಳ್ಳಿಗಳು ದೇಶದ ಆತ್ಮಗಳಾಗಿವೆ. ಗ್ರಾಮಗಳ ಬೆಳವಣಿಗೆಯಿಂದಲೇ ದೇಶದ ಅಭಿವೃದ್ಧಿ. ಜಾತ್ರೆಗಳು ಗ್ರಾಮೀಣ ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆಗೆ ಸರಳವಾದ ಮಾರ್ಗ ತೋರಿಸುತ್ತವೆ. ದೇಶದ ಆರ್ಥಿಕ ಶಕ್ತಿಯೊಂದಿಗೆ ಸಾಂಸ್ಕೃತಿಕ ಶಕ್ತಿಯೂ ವೃದ್ದಿಸಬೇಕು ಎಂದು ತಿಳಿಸಿದರು.</p>.<p>ರಥೋತ್ಸವ ನಿಮಿತ್ತ ಆಯೋಜಿಸಿದ್ದ ಪಲ್ಲಕ್ಕಿ ಉತ್ಸವಕ್ಕೆ ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಪೀಠಾಧಿಪತಿ ಕರುಣಾದೇವಿ ತಾಯಿ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯಗಳು, ಪುರವಂತರ ವೀರಗಾಸೆ, ಭಜನೆ, ಹಲಗೆಮೇಳ, ಕುಂಭ ಕಳಸಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಸಾಗಿ ರಥ ಸಮೀಪ ತಲುಪಿತು.</p>.<p>ನಂತರ ಥೇರು ಮೈದಾನದಲ್ಲಿ ರಥದ ಹತ್ತಿರ ಕರುಣಾದೇವಿತಾಯಿ, ರಾಜೇಶ್ವರ ಶಿವಾಚಾರ್ಯರು, ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಪಾಟೀಲ, ಮುಖಂಡರಾದ ಶ್ರೀಕಾಂತ ದಾನಾ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಹಲಬರ್ಗಾ, ತಳವಾಡ, ಜ್ಯಾಂತಿ, ರುದನೂರ, ಮಳಚಾಪೂರ, ಜೋಳದಪಕಾ, ನೇಳಗಿ, ಸಿದ್ದೇಶ್ವರ, ತಳವಾಡ(ಕೆ), ಕರಡ್ಯಾಳ ಸೇರಿದಂತೆ ವಿವಿಧ ಗ್ರಾಮದ ಭಕ್ತರು ಭಾಗವಹಿಸಿ ಭಕ್ತಿ ಭಾವ ಮೆರೆದರು.</p>.<p>ನಟ ಬಿ.ಜೆ.ವಿಷ್ಣುಕಾಂತ, ಡಾ.ಓಂಕಾರ ಸ್ವಾಮಿ, ಗುಂಡೇರಾವ್ ಪಾಟೀಲ, ಶ್ರೀಕಾಂತ ದಾನಿ, ಶರಣಬಸವ ಪಿ.ಪಾಟೀಲ, ಆದರ್ಶ ಪಾಟೀಲ, ಗುರುನಾಥ ಬಿರಾದಾರ, ಕವಿರಾಜ ಪಾಟೀಲ, ವಿಜಯಕುಮಾರ ಹಾಳೆ, ವಿಜಯಕುಮಾರ ಗೋದಿಹಿಪ್ಪರಗೆ, ಸೂರ್ಯಕಾಂತ ಜೆಮಶೆಟ್ಟೆ, ವಿಷ್ಣುಕಾಂತ ಜಮಶೆಟ್ಟೆ, ಬಸವರಾಜ ಹಾಲಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ಗ್ರಾಮೀಣ ಭಾರತದ ಸೌಹಾರ್ದ ಮತ್ತು ಆರ್ಥಿಕ ಸುಭದ್ರತೆಯಲ್ಲಿ ಜಾತ್ರೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಗೋರ್ಟಾದ ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮದ ಧರ್ಮ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>ಹಳ್ಳಿಗಳು ದೇಶದ ಆತ್ಮಗಳಾಗಿವೆ. ಗ್ರಾಮಗಳ ಬೆಳವಣಿಗೆಯಿಂದಲೇ ದೇಶದ ಅಭಿವೃದ್ಧಿ. ಜಾತ್ರೆಗಳು ಗ್ರಾಮೀಣ ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆಗೆ ಸರಳವಾದ ಮಾರ್ಗ ತೋರಿಸುತ್ತವೆ. ದೇಶದ ಆರ್ಥಿಕ ಶಕ್ತಿಯೊಂದಿಗೆ ಸಾಂಸ್ಕೃತಿಕ ಶಕ್ತಿಯೂ ವೃದ್ದಿಸಬೇಕು ಎಂದು ತಿಳಿಸಿದರು.</p>.<p>ರಥೋತ್ಸವ ನಿಮಿತ್ತ ಆಯೋಜಿಸಿದ್ದ ಪಲ್ಲಕ್ಕಿ ಉತ್ಸವಕ್ಕೆ ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಪೀಠಾಧಿಪತಿ ಕರುಣಾದೇವಿ ತಾಯಿ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯಗಳು, ಪುರವಂತರ ವೀರಗಾಸೆ, ಭಜನೆ, ಹಲಗೆಮೇಳ, ಕುಂಭ ಕಳಸಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಸಾಗಿ ರಥ ಸಮೀಪ ತಲುಪಿತು.</p>.<p>ನಂತರ ಥೇರು ಮೈದಾನದಲ್ಲಿ ರಥದ ಹತ್ತಿರ ಕರುಣಾದೇವಿತಾಯಿ, ರಾಜೇಶ್ವರ ಶಿವಾಚಾರ್ಯರು, ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಪಾಟೀಲ, ಮುಖಂಡರಾದ ಶ್ರೀಕಾಂತ ದಾನಾ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಹಲಬರ್ಗಾ, ತಳವಾಡ, ಜ್ಯಾಂತಿ, ರುದನೂರ, ಮಳಚಾಪೂರ, ಜೋಳದಪಕಾ, ನೇಳಗಿ, ಸಿದ್ದೇಶ್ವರ, ತಳವಾಡ(ಕೆ), ಕರಡ್ಯಾಳ ಸೇರಿದಂತೆ ವಿವಿಧ ಗ್ರಾಮದ ಭಕ್ತರು ಭಾಗವಹಿಸಿ ಭಕ್ತಿ ಭಾವ ಮೆರೆದರು.</p>.<p>ನಟ ಬಿ.ಜೆ.ವಿಷ್ಣುಕಾಂತ, ಡಾ.ಓಂಕಾರ ಸ್ವಾಮಿ, ಗುಂಡೇರಾವ್ ಪಾಟೀಲ, ಶ್ರೀಕಾಂತ ದಾನಿ, ಶರಣಬಸವ ಪಿ.ಪಾಟೀಲ, ಆದರ್ಶ ಪಾಟೀಲ, ಗುರುನಾಥ ಬಿರಾದಾರ, ಕವಿರಾಜ ಪಾಟೀಲ, ವಿಜಯಕುಮಾರ ಹಾಳೆ, ವಿಜಯಕುಮಾರ ಗೋದಿಹಿಪ್ಪರಗೆ, ಸೂರ್ಯಕಾಂತ ಜೆಮಶೆಟ್ಟೆ, ವಿಷ್ಣುಕಾಂತ ಜಮಶೆಟ್ಟೆ, ಬಸವರಾಜ ಹಾಲಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>