<p><strong>ಬಸವಕಲ್ಯಾಣ: </strong>‘ಕಾವ್ಯ ಬರೀ ಶಬ್ದಗಳ ಭಂಡಾರ ಹಾಗೂ ಪಾಂಡಿತ್ಯದ ಪ್ರದರ್ಶನವಾಗದೆ ಅದರಲ್ಲಿ ಸಾರ್ವತ್ರಿಕ ಹಿತ ಅಡಗಿರಬೇಕು’ ಎಂದು ಸಾಹಿತಿ ಡಾ.ಬಸವರಾಜ ಬಲ್ಲೂರ ಹೇಳಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪ್ರತಿಮಾ ಪ್ರಕಾಶನದಿಂದ ಸಾತ್ವಿಕ ವಿ.ಪಾಟೀಲನ 2 ನೇ ಹುಟ್ಟುಹಬ್ಬದ ನಿಮಿತ್ತ ಗುರುವಾರ ಇಲ್ಲಿ ಆಯೋಜಿಸಿದ್ದ ವೀರಶೆಟ್ಟಿ ಪಾಟೀಲ ಅವರ ‘ಮೂರನೇ ಮಹಾಯುದ್ಧ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಒತ್ತಡದಿಂದ ಹೊರಹೊಮ್ಮದೆ ಅಂತರಾತ್ಮದಿಂದ ಮೂಡಿಬರಬೇಕು. ಮೂರನೇ ಮಹಾಯುದ್ಧ ಸಂಕಲನವ ಸಾಮಾಜಿಕ ಕಳಕಳಿ ಅಭಿವ್ಯಕ್ತಪಡಿಸಿದೆ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಮಾತನಾಡಿ, ‘ಕಲಬೆರಕೆ ಆಹಾರದಿಂದ ನಾನಾ ರೋಗಗಳು ಬಂದು ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಇದನ್ನೇ ವೀರಶೆಟ್ಟಿಯವರು ಯುದ್ಧವಾಗಿದೆ ಎಂಬುದನ್ನು ಕಲ್ಪಿಸಿ ಕಾವ್ಯ ಬರೆದಿದ್ದಾರೆ’ ಎಂದರು.</p>.<p>ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ದೇವೇಂದ್ರ ಬರಗಾಲೆ, ಉಪನ್ಯಾಸಕ ಅಂಬರೀಶ ಭೀಮಾಣೆ, ಚನ್ನಬಸಪ್ಪ ಶೆಟ್ಟೆಪ್ಪ, ರಾಜಕುಮಾರ ಪಾಲಾಪುರೆ ಮಾತನಾಡಿದರು.</p>.<p>ಮಲ್ಲಿಕಾರ್ಜುನ ಕಾಡಾದಿ, ಡಾ.ಚಿತ್ರಶೇಖರ ಚಿರಳ್ಳಿ, ಪಂಚಾಕ್ಷರಿ ಹಿರೇಮಠ, ನಾಗೇಂದ್ರ ಬಿರಾದಾರ, ವೀರಶೆಟ್ಟಿ ಎಂ.ಪಾಟೀಲ, ಹಣಮಂತರಾವ್ ವಿಸಾಜಿ, ಗೌತಮ ಬಕ್ಕಪ್ಪ ಹಾಗೂ ದಿವ್ಯಾರಾಣಿ ಕವನ ವಾಚಿಸಿದರು.</p>.<p>ಉಪ ವಿಭಾಗಾಧಿಕಾರಿಯಾಗಿ ಆಯ್ಕೆಗೊಂಡಿರುವ ಸಾವಿತ್ರಿ ಬಿರಾದಾರ, ಡಿಡಿಪಿಯು ರಮೇಶ ಬೆಜಗಂ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ಕುಂಬಾರೆ ಅವರನ್ನು ಸನ್ಮಾನಿಸಲಾಯಿತು.</p>.<p>ತಿಪ್ಪಣ್ಣ ಚಿಂತಾಲೆ, ಪ್ರತಿಮಾ ಪಾಟೀಲ, ಚನ್ನವೀರ ಜಮಾದಾರ, ನರಸಿಂಗರೆಡ್ಡಿ ಗದ್ಲೇಗಾಂವ, ಕ್ಷೇಮಲಿಂಗ ಬೆಳಮಗಿ, ಶಿವಕುಮಾರ ಮಠಪತಿ, ಚಂದ್ರಶೇಖರ ಸ್ವಾಮಿ, ಮಹಾದೇವ ಬಿರಾದಾರ ಪಾಲ್ಗೊಂಡಿದ್ದರು. ಅತಿಥಿಗಳಿಗೆ ಪುಷ್ಪಮಾಲೆಯ ಬದಲಾಗಿ ಮೆಂತೆ ಸೊಪ್ಪನ್ನು ನೀಡಿ ಸತ್ಕರಿಸಿರುವುದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>‘ಕಾವ್ಯ ಬರೀ ಶಬ್ದಗಳ ಭಂಡಾರ ಹಾಗೂ ಪಾಂಡಿತ್ಯದ ಪ್ರದರ್ಶನವಾಗದೆ ಅದರಲ್ಲಿ ಸಾರ್ವತ್ರಿಕ ಹಿತ ಅಡಗಿರಬೇಕು’ ಎಂದು ಸಾಹಿತಿ ಡಾ.ಬಸವರಾಜ ಬಲ್ಲೂರ ಹೇಳಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪ್ರತಿಮಾ ಪ್ರಕಾಶನದಿಂದ ಸಾತ್ವಿಕ ವಿ.ಪಾಟೀಲನ 2 ನೇ ಹುಟ್ಟುಹಬ್ಬದ ನಿಮಿತ್ತ ಗುರುವಾರ ಇಲ್ಲಿ ಆಯೋಜಿಸಿದ್ದ ವೀರಶೆಟ್ಟಿ ಪಾಟೀಲ ಅವರ ‘ಮೂರನೇ ಮಹಾಯುದ್ಧ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಒತ್ತಡದಿಂದ ಹೊರಹೊಮ್ಮದೆ ಅಂತರಾತ್ಮದಿಂದ ಮೂಡಿಬರಬೇಕು. ಮೂರನೇ ಮಹಾಯುದ್ಧ ಸಂಕಲನವ ಸಾಮಾಜಿಕ ಕಳಕಳಿ ಅಭಿವ್ಯಕ್ತಪಡಿಸಿದೆ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಮಾತನಾಡಿ, ‘ಕಲಬೆರಕೆ ಆಹಾರದಿಂದ ನಾನಾ ರೋಗಗಳು ಬಂದು ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಇದನ್ನೇ ವೀರಶೆಟ್ಟಿಯವರು ಯುದ್ಧವಾಗಿದೆ ಎಂಬುದನ್ನು ಕಲ್ಪಿಸಿ ಕಾವ್ಯ ಬರೆದಿದ್ದಾರೆ’ ಎಂದರು.</p>.<p>ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ದೇವೇಂದ್ರ ಬರಗಾಲೆ, ಉಪನ್ಯಾಸಕ ಅಂಬರೀಶ ಭೀಮಾಣೆ, ಚನ್ನಬಸಪ್ಪ ಶೆಟ್ಟೆಪ್ಪ, ರಾಜಕುಮಾರ ಪಾಲಾಪುರೆ ಮಾತನಾಡಿದರು.</p>.<p>ಮಲ್ಲಿಕಾರ್ಜುನ ಕಾಡಾದಿ, ಡಾ.ಚಿತ್ರಶೇಖರ ಚಿರಳ್ಳಿ, ಪಂಚಾಕ್ಷರಿ ಹಿರೇಮಠ, ನಾಗೇಂದ್ರ ಬಿರಾದಾರ, ವೀರಶೆಟ್ಟಿ ಎಂ.ಪಾಟೀಲ, ಹಣಮಂತರಾವ್ ವಿಸಾಜಿ, ಗೌತಮ ಬಕ್ಕಪ್ಪ ಹಾಗೂ ದಿವ್ಯಾರಾಣಿ ಕವನ ವಾಚಿಸಿದರು.</p>.<p>ಉಪ ವಿಭಾಗಾಧಿಕಾರಿಯಾಗಿ ಆಯ್ಕೆಗೊಂಡಿರುವ ಸಾವಿತ್ರಿ ಬಿರಾದಾರ, ಡಿಡಿಪಿಯು ರಮೇಶ ಬೆಜಗಂ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ಕುಂಬಾರೆ ಅವರನ್ನು ಸನ್ಮಾನಿಸಲಾಯಿತು.</p>.<p>ತಿಪ್ಪಣ್ಣ ಚಿಂತಾಲೆ, ಪ್ರತಿಮಾ ಪಾಟೀಲ, ಚನ್ನವೀರ ಜಮಾದಾರ, ನರಸಿಂಗರೆಡ್ಡಿ ಗದ್ಲೇಗಾಂವ, ಕ್ಷೇಮಲಿಂಗ ಬೆಳಮಗಿ, ಶಿವಕುಮಾರ ಮಠಪತಿ, ಚಂದ್ರಶೇಖರ ಸ್ವಾಮಿ, ಮಹಾದೇವ ಬಿರಾದಾರ ಪಾಲ್ಗೊಂಡಿದ್ದರು. ಅತಿಥಿಗಳಿಗೆ ಪುಷ್ಪಮಾಲೆಯ ಬದಲಾಗಿ ಮೆಂತೆ ಸೊಪ್ಪನ್ನು ನೀಡಿ ಸತ್ಕರಿಸಿರುವುದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>