‘ಜನಪ್ರತಿನಿಧಿ, ಅಧಿಕಾರಿ, ಸರ್ಕಾರ ನನ್ನ ಬೆಳೆಯನ್ನು ಖರೀದಿ ಮಾಡಿ ಜನರಿಗೆ ಹಂಚಿದರೂ ನಾನು ಆರ್ಥಿಕ ನಷ್ಟದಿಂದ ಹೊರ ಬರಲು ಸಹಕರಿಸಿದಂತೆ ಆಗುತ್ತದೆ. ಹಾಳಾದ ಬೆಳೆಯನ್ನು ಹೊಲದಿಂದ ತೆಗೆಸಿ ಬೀಸಾಡಲು ಕನಿಷ್ಠ ₹50 ಸಾವಿರ ಖರ್ಚಾಗುತ್ತದೆ. ಸರ್ಕಾರ ರೈತರ ನೆರವಿಗೆ ಧಾವಿಸಿ ನಮ್ಮನ್ನು ಸಾಲದ ಶೂಲದಿಂದ ಹೊರತರಬೇಕು’ ಎಂದು ಅವರು ಮನವಿ ಮಾಡಿದರು.