ಬೀದರ್: ಸ್ನೇಹಾ ಕಲ್ಚರಲ್ ಫೌಂಡೇಶನ್ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನೌಬಾದ್ನ ಆಟೊನಗರ ಸಮೀಪದ ಅಲೆಮಾರಿಗಳು, ವಡ್ಡರ ಕಾಲೊನಿಯ ಬಡವರು ಹಾಗೂ ನಗರದ ವಿವಿಧೆಡೆ ಕೋವಿಡ್ ವಾರಿಯರ್ಸ್ಗೆ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಪಾಟೆ, ಪುನಿತ್ ಸಾಳೆ, ಸೌರಭ ಅಂಬೆಸಿಂಗಿ, ಅನೂಪ್ ಕುಲಕರ್ಣಿ, ಅಭಿಷೇಕ ರೆಡ್ಡಿ, ವೀರೇಶ ಸ್ವಾಮಿ ಹಾಜರಿದ್ದರು.
ಉಚಿತ ಆಹಾರ, ಹಣ್ಣು ವಿತರಣೆ
ಜನವಾಡ: ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ನವಜೀವನ ಕಾಲೊನಿಯ ಬಳಿ ಕುಷ್ಠರೋಗಿಗಳು ಹಾಗೂ ಬಡವರಿಗೆ ಉಚಿತ ಆಹಾರ ಹಾಗೂ ಬಾಳೆ ಹಣ್ಣು ವಿತರಿಸಲಾಯಿತು.
ಯುವ ಮುಖಂಡ ಚನ್ನಬಸವ ಬ್ಯಾಲಹಳ್ಳಿ, ಚನ್ನಬಸಯ್ಯ ಸ್ವಾಮಿ ಇದ್ದರು.