ಬೀದರ್: ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ನಿರಾಶ್ರಿತರು ಹಾಗೂ ಬಡವರಿಗೆ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ಗುಂಪಾ, ರೈಲ್ವೆ ನಿಲ್ದಾಣ, ಕೆಇಬಿ ಹನುಮಾನ ಮಂದಿರ, ಗಾಂಧಿಗಂಜ್, ಪಾಪನಾಶ ಗೇಟ್, ಬಸ್ ನಿಲ್ದಾಣ ಸೇರಿ ವಿವಿಧೆಡೆ ಪೊಟ್ಟಣ ವಿತರಣೆ ಮಾಡಲಾಯಿತು.
‘18 ದಿನಗಳಿಂದ ನಿತ್ಯ 200ಕ್ಕೂ ಹೆಚ್ಚು ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ಉಚಿತ ವಿತರಿಸಲಾಗುತ್ತಿದೆ. ಜೂನ್ 7ರ ವರೆಗೂ ಸೇವೆ ಮುಂದುವರಿಯಲಿದೆ’ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕಾಂಬಳೆ ತಿಳಿಸಿದರು.