ಬೀದರ್: ‘ರಾಣಿ ಸತ್ಯಮೂರ್ತಿ ಅವರ ಕಲಾ ಸೇವೆ ಅನನ್ಯವಾಗಿದೆ. ಕಲೆಯನ್ನು, ಕಲಾವಿದರನ್ನು ಬೆಳೆಸಲು ಅವರು ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ. ಕಲೆಗಾಗಿ ಬದುಕು ಮೀಸಲಿಟ್ಟ ಅವರನ್ನು ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ’ ಎಂದು ಉದ್ಯಮಿ ಬಸವರಾಜ ಧನ್ನೂರ್ ಹೇಳಿದರು.