‘ಕೋವಿಡ್ ಎರಡನೇ ಅಲೆಯಲ್ಲಿ ಉದ್ಯೋಗ, ವೇತನ ಇಲ್ಲದೆ ಮನೆ ಬಾಡಿಗೆ, ಕಿರಾಣಿ, ತರಕಾರಿಯಂತಹ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದಂತಹ ದುಸ್ಥಿತಿ ಎದುರಾಗಿದೆ. ಮುಂದೆ ಕೋವಿಡ್ ಮೂರನೇ ಅಲೆ ಬರುವ ಸೂಚನೆಗಳು ಇರುವುದರಿಂದ ಉದ್ಯೋಗ ಮಾಡುವ ಭರವಸೆ ಕಳೆದುಕೊಂಡು ಆತಂಕದಲ್ಲಿ ಉಪನ್ಯಾಸಕರು ಬದುಕು ನಡೆಸುತ್ತಿದ್ದಾರೆ’ ಎಂದು ಉಪನ್ಯಾಸಕ ಶರಣು ಶಿರ್ಸೆ ಕಳವಳ ವ್ಯಕ್ತಪಡಿಸಿದ್ದಾರೆ.