ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಬದಲಾದ ಜೀವನಶೈಲಿ; ಹೃದಯಾಘಾತ ಹೆಚ್ಚಳ: ಡಾ. ನಿತಿನ್‌ ಗುದಗೆ ಅಭಿಪ್ರಾಯ

Published : 6 ಜುಲೈ 2025, 5:59 IST
Last Updated : 6 ಜುಲೈ 2025, 5:59 IST
ಫಾಲೋ ಮಾಡಿ
Comments
ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚಿನ ಜನ ಸಾವನ್ನಪ್ಪುತ್ತಿರುವುದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯವಾಗಿ ಇರಬಹುದು
ಡಾ. ವಿಜಯಕುಮಾರ ಕೋಟೆ ಅಧ್ಯಕ್ಷ ಭಾರತೀಯ ವೈದ್ಯಕೀಯ ಸಂಘ
ಬೀದರ್‌ನಲ್ಲಿ ‘ಪ್ರೈಮರಿ ಆ್ಯಂಜಿಯೊಪ್ಲಾಸ್ಟಿ’ ಸೌಕರ್ಯ ಇದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಲ್ಲ. ಹೃದಯದ ಸಮಸ್ಯೆ ಕಂಡು ಬಂದರೆ ತಕ್ಷಣವೇ ಈ ಚಿಕಿತ್ಸೆ ಪಡೆಯಬೇಕು
ಡಾ. ನಿತಿನ್‌ ಗುದಗೆ ಕಾರ್ಡಿಯೊಲಜಿಸ್ಟ್‌
‘ಮಕ್ಕಳಿಗೆ ಹೋಮ್‌ ವರ್ಕ್‌ ಒತ್ತಡ’
‘ಇತ್ತೀಚಿನ ವರ್ಷಗಳಲ್ಲಿ ಒತ್ತಡ ಎನ್ನುವುದು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಎರಡ್ಮೂರು ವರ್ಷದ ಮಕ್ಕಳಿದ್ದಾಗಲೇ ಒತ್ತಡ ಹಾಕುತ್ತಿದ್ದೇವೆ. ಕಿಂಡರ್‌ ಗಾರ್ಡನ್‌ಗೆ ಮಕ್ಕಳನ್ನು ಆಟ ಆಡಿಸಲು ಕಳಿಸುತ್ತಿಲ್ಲ. ಬದಲಾಗಿ ‘ರೈಮ್ಸ್‌’ ಓದಿಸಲು ಕಳಿಸುತ್ತಿದ್ದೇವೆ. ಮಕ್ಕಳ ಹೆಚ್ಚಿನ ಸಮಯ ‘ಹೋಮ್‌ ವರ್ಕ್‌’ ಮಾಡುವುದರಲ್ಲೇ ಕಳೆದು ಹೋಗುತ್ತಿದೆ. ಅವರ ಸಹಜ ಬೆಳವಣಿಗೆ ಆಗುತ್ತಿಲ್ಲ’ ಎಂದು ಡಾ. ವಿ.ವಿ. ನಾಗರಾಜ್‌ ತಿಳಿಸಿದರು. ಜಂಕ್‌ಫುಡ್‌ ಫಾಸ್ಟ್‌ಫುಡ್‌ ಎಲ್ಲರದರಲ್ಲೂ ಟೇಸ್ಟಿಂಗ್‌ ಪೌಡರ್‌ ಹಾಕುತ್ತಿದ್ದಾರೆ. ಇದು ವಿಷಕಾರಿ ರಸಾಯನಿಕ ಅಂಶ ಹೊಂದಿದೆ. ಅದು ಹೊಟ್ಟೆ ಸೇರಿಕೊಳ್ಳುತ್ತಿರುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಕೂಡ ಪ್ರಮುಖ ಕಾರಣ ಎಂದರು.
‘ನಾರಾಯಣಮೂರ್ತಿ ಸುಬ್ರಹ್ಮಣ್ಯ ಹೇಳಿಕೆ ಖಂಡನಾರ್ಹ’
‘ಎಲ್‌ ಅಂಡ್‌ ಟಿ ಮುಖ್ಯಸ್ಥ ಸುಬ್ರಹ್ಮಣ್ಯ ಅವರು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದರೆ ಇನ್‌ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಕೊಟ್ಟಿರುವ ಹೇಳಿಕೆ ಖಂಡನಾರ್ಹ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ಕೂಡ ಇದನ್ನು ಖಂಡಿಸಿದೆ’ ಎಂದು ಫಿಜಿಶಿಯನ್‌ ಡಾ. ಸಚಿನ್‌ ಗುದಗೆ ತಿಳಿಸಿದರು. ‘ಈಗಾಗಲೇ ಹೆಚ್ಚಿನ ಒತ್ತಡದಲ್ಲಿ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹದ್ದರಲ್ಲಿ ದೊಡ್ಡ ಸ್ಥಾನದಲ್ಲಿ ಕುಳಿತಿರುವವರು ಈ ರೀತಿ ಮಾತನಾಡಿರುವುದು ಸರಿಯಲ್ಲ. ಜನರ ಆರೋಗ್ಯ ಬಹಳ ಮುಖ್ಯವಾದುದು. ಒಂದೇ ಜಾಗದಲ್ಲಿ ಗಂಟೆಗಟ್ಟಲೇ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT