ತೋಟಗಾರಿಕೆ ಬೆಳೆಗಳಾದ ಪಪಾಯ, ಮೆಣಸಿನಕಾಯಿ, ಟೊಮೆಟೊ, ಚೆಂಡು ಹೂ, ಬೆಂಡೆಕಾಯಿ, ಮಾವು, ನಿಂಬೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸೋರೆಕಾಯಿ, ನುಗ್ಗೆಕಾಯಿ, ಈರುಳ್ಳಿ, ಬದನೆಕಾಯಿ, ಅದ್ರಕ, ಅರಶಿನ ಮತ್ತು ಕಬ್ಬು ಸೇರಿದಂತೆ ಹಲವು ರೀತಿಯ ಬೆಳೆಗಳು ಜಮೀನಿನಲ್ಲಿ ನೀರು ನಿಂತಿದ್ದರಿಂದ ಕೊಳೆಯುತ್ತಿವೆ. ಅಲ್ಲದೆ, ಭಾರಿ ಮಳೆಯಿಂದಾಗಿ ಕೈಗೆ ಬಂದ ಫಸಲು ನೆಲಕಚ್ಚಿವೆ.