ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಲಸೂರ: ರಸ್ತೆ ಸೌಲಭ್ಯ ಕಾಣದ ಘೋಲ ತಾಂಡಾ!

ಗುರುಪ್ರಸಾದ ಮೆಂಟೇ
Published : 15 ಸೆಪ್ಟೆಂಬರ್ 2025, 6:14 IST
Last Updated : 15 ಸೆಪ್ಟೆಂಬರ್ 2025, 6:14 IST
ಫಾಲೋ ಮಾಡಿ
Comments
ಪ್ರವೀಣ ಸುರೇಶ ಪಾಟೀಲ
ಪ್ರವೀಣ ಸುರೇಶ ಪಾಟೀಲ
ತಲೆಮಾರುಗಳು ಉರುಳಿ ಹೋಗಿವೆ. ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಮುಂದಿನ ಪೀಳಿಗೆಗಾದರೂ ರಸ್ತೆ ಅಭಿವೃದ್ಧಿಪಡಿಸಿಕೊಡಿ
ಪ್ರವೀಣ ಸುರೇಶ ಪಾಟೀಲ ಗ್ರಾಮದ ಮುಖಂಡ
ಘೋಲತಾಂಡಾಕ್ಕೆ ರಸ್ತೆ ಇರದಿರುವುದು ನನ್ನ ಗಮನಕ್ಕೆ ಇಲ್ಲ. ಕೆಕೆಆರ್‌ಡಿಬಿ ಯೋಜನೆಯಡಿ ರಸ್ತೆ ಮಾಡಲು ಅವಕಾಶ ಇದೆ. ರಸ್ತೆ ಮಂಜೂರಾತಿ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚಿಸುವೆ
ಸೂರ್ಯಕಾಂತ ಬಿರಾದಾರ ಇಒ ತಾ.ಪಂ
ಸೇತುವೆ ನಿರ್ಮಾಣಕ್ಕೆ ಒತ್ತಾಯ
ಘೋಲ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಹಳ್ಳಗಳು ಬರುತ್ತೇವೆ. ಸ್ವಲ್ಪ ಮಳೆಯಾದರೂ ಹಳ್ಳಗಳು ತುಂಬಿ ಹರಿಯುತ್ತವೆ. ‘ನಾವು ಹುಟ್ಟಿನಿಂದ ಅಲ್ಲ. ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ದಾರಿ ಕೆಸರು ಗದ್ದೆಯಂತಾಗುತ್ತದೆ. ಹಳ್ಳ ತುಂಬಿ ಹರಿದರೆ ದಾಟಿ ಬೇರೆಡೆ ಹೋಗಲಾರದಂಥ ಪರಿಸ್ಥಿತಿ. ಈ ಹಾಣಾದಿಯಲ್ಲಿ ಬೈಕ್‌ ಓಡಿಸಲು ಆಗಲ್ಲ. ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆಯಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದರೆ ಮಂಚ ಅಥವಾ ಭುಜದ ಮೇಲೆ ಹೊತ್ತುಕೊಂಡು ಹೋಗಬೇಕು. ಕೂಡಲೇ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT