‘ಬುಡಾ ಅಕ್ರಮ– ಕಾನೂನು ಕ್ರಮ’
‘ಬುಡಾ ಅಕ್ರಮದಲ್ಲಿ ಯಾರೇ ಅಕ್ರಮ ಎಸಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ತಿಳಿಸಿದರು. ‘ಬುಡಾ ಅಕ್ರಮದ ತನಿಖೆಲಿ ಎಲ್ಲಿಗೆ ಬಂತು’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಈ ಕುರಿತು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರನ್ನೇ ಕೇಳಿ ಎಂದು ಖಂಡ್ರೆ ಹೇಳಿದರು. ‘ನೀವು ಜಿಲ್ಲಾ ಉಸ್ತುವಾರಿ ಸಚಿವರು. ನೀವೇ ಉತ್ತರಿಸುವುದು ಸೂಕ್ತ’ ಎಂದು ಪತ್ರಕರ್ತರು ಹೇಳಿದಾಗ, ಅಕ್ರಮ ಎಸಗಿದವರು ಯಾರೇ ಆಗಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಂಡ್ರೆ ಪ್ರತಿಕ್ರಿಯಿಸಿದರು.