<p><strong>ಔರಾದ್:</strong> ತಾಲ್ಲೂಕಿನ ಎಕಂಬಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಪಾರ ಸಂಖ್ಯೆ ಭಕ್ತರ ನಡುವೆ ಭಾನುವಾರ ಹರಿನಾಮ ಸಪ್ತಾಹ ಸಮಾರೋಪ ನಡೆಯಿತು.</p>.<p>ಕರಣ ಗಜೇಂದ್ರ ಭಾರತಿ ಮಹಾರಾಜ, ಅವಧೂತ ಆನಂದ ಮಹಾರಾಜರ ನೇತೃತ್ವದಲ್ಲಿ ಒಂದು ವಾರ ಕಾಲ ನಡೆದ ಭಜನೆ, ಕೀರ್ತನೆಯಲ್ಲಿ ಭಕ್ತರು ಮಿಂದೆದ್ದು ಭಕ್ತಿ ಭಾವ ಮೆರೆದರು.</p>.<p>‘ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಕೀರ್ತನೆಗಳಿಗೆ ವಿಶೇಷ ಅರ್ಥವಿದೆ. ಇಂತಹ ಆಧುನಿಕ ಯುಗದಲ್ಲೂ ಜನರು ಧಾರ್ಮಿಕ ಕಾರ್ಯಕ್ರಮಗಳ ಕಡೆ ಮುಖ ಮಾಡಿದ್ದಾರೆ’ ಎಂದು ಕರಣ ಗಜೇಂದ್ರ ಭಾರತಿ ಮಹಾರಾಜ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಶಾಸಕ ಪ್ರಭು ಚವಾಣ್ ಮಾತನಾಡಿ, ‘ಸಮಾಜದಲ್ಲಿ ಶಾಂತಿ, ಸಮಾಧಾನ, ಸಮೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ತಾಲ್ಲೂಕಿನ ಗಡಿಭಾಗ ಬಹು ಸಂಸ್ಕೃತಿಯ ತವರೂರು’ ಎಂದರು.</p>.<p>ಮುಖಂಡ ರಮೇಶ ಉಪಾಸೆ, ಹರಿ ಕೊಂಡಾಪೂರೆ, ಯೋಗೇಶ್ ಸುರನಾರ, ರಾಮರಾವ ಪಾಟೀಲ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ತಾಲ್ಲೂಕಿನ ಎಕಂಬಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಪಾರ ಸಂಖ್ಯೆ ಭಕ್ತರ ನಡುವೆ ಭಾನುವಾರ ಹರಿನಾಮ ಸಪ್ತಾಹ ಸಮಾರೋಪ ನಡೆಯಿತು.</p>.<p>ಕರಣ ಗಜೇಂದ್ರ ಭಾರತಿ ಮಹಾರಾಜ, ಅವಧೂತ ಆನಂದ ಮಹಾರಾಜರ ನೇತೃತ್ವದಲ್ಲಿ ಒಂದು ವಾರ ಕಾಲ ನಡೆದ ಭಜನೆ, ಕೀರ್ತನೆಯಲ್ಲಿ ಭಕ್ತರು ಮಿಂದೆದ್ದು ಭಕ್ತಿ ಭಾವ ಮೆರೆದರು.</p>.<p>‘ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಕೀರ್ತನೆಗಳಿಗೆ ವಿಶೇಷ ಅರ್ಥವಿದೆ. ಇಂತಹ ಆಧುನಿಕ ಯುಗದಲ್ಲೂ ಜನರು ಧಾರ್ಮಿಕ ಕಾರ್ಯಕ್ರಮಗಳ ಕಡೆ ಮುಖ ಮಾಡಿದ್ದಾರೆ’ ಎಂದು ಕರಣ ಗಜೇಂದ್ರ ಭಾರತಿ ಮಹಾರಾಜ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಶಾಸಕ ಪ್ರಭು ಚವಾಣ್ ಮಾತನಾಡಿ, ‘ಸಮಾಜದಲ್ಲಿ ಶಾಂತಿ, ಸಮಾಧಾನ, ಸಮೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ತಾಲ್ಲೂಕಿನ ಗಡಿಭಾಗ ಬಹು ಸಂಸ್ಕೃತಿಯ ತವರೂರು’ ಎಂದರು.</p>.<p>ಮುಖಂಡ ರಮೇಶ ಉಪಾಸೆ, ಹರಿ ಕೊಂಡಾಪೂರೆ, ಯೋಗೇಶ್ ಸುರನಾರ, ರಾಮರಾವ ಪಾಟೀಲ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>