<p><strong>ಚಿಟಗುಪ್ಪ: </strong>‘ಸ್ಪಧಾತ್ಮಕ ಪರೀಕ್ಷಾ ಸಿದ್ಧತೆಗೆ ‘ಪ್ರಜಾವಾಣಿ’ಯ ಮಾಸ್ಟರ್ ಮೈಂಡ್ ಆನ್ಲೈನ್ ಪತ್ರಿಕೆ ಉಪಯುಕ್ತ’ ಎಂದು ಪ್ರಾಚಾರ್ಯೆ ಸಂಗೀತಾ ಪಾಟೀಲ ತಿಳಿಸಿದರು.</p>.<p>ಮಾಸ್ಟರ್ ಮೈಂಡ್ ಆನ್ಲೈನ್ ಪತ್ರಿಕೆ ಸಹಯೋಗದಲ್ಲಿ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಪತ್ರಿಕೆಯಲ್ಲಿ, ಬಹು ಆಯ್ಕೆಯ ವಸ್ತು ಹಾಗೂ ವಿಷಯನಿಷ್ಠ ಅಂಶಗಳ ಕುರಿತು ಅತ್ಯಂತ ವಿವರವಾಗಿ ಬರೆಯಲಾಗುತ್ತದೆ. ಅಭ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸಲಾಗುತ್ತಿದೆ. ಅಭ್ಯರ್ಥಿಗಳು ಇದನ್ನು ಪ್ರತಿದಿನ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.</p>.<p>ವೀರೇಶ್.ಎನ್ ಮಠಪತಿ ಸ್ಫರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತು ಉಪನ್ಯಾಸ ನೀಡಿದರು. ಪ್ರವೀಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಉಪನ್ಯಾಸಕ ಸೋಮನಾಥ ಪಾಟೀಲ ಮಾತನಾಡಿ,‘ಪ್ರಜಾವಾಣಿ 70 ವರ್ಷಗಳಿಂದ ರಾಜ್ಯದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದೆ. ಪ್ರತಿಭಾನ್ವಿತರಿಗೆ ವೇದಿಕೆಯಾಗಿದೆ’ ಎಂದರು.</p>.<p>ಕನ್ನಡ ಪಂಡಿತ ನೀಲಕಂಠ ಇಸ್ಲಾಮಪುರ್, ಮುಖ್ಯಶಿಕ್ಷಕ ಅಶೋಕ ಮಠಪತಿ ಹಾಗೂ ಆಡಳಿತಾಧಿಕಾರಿ ರಾಜಕುಮಾರ್ ಇದ್ದರು.</p>.<p>ಪದವಿ ಪೂರ್ವ ಹಾಗೂ ಪದವಿಯ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<p>ಸ್ಥಳದಲ್ಲಿಯೇ ಹಲವರು ಮಾಸ್ಟರ್ ಮೈಂಡ್ಚಂದಾದಾರಿಕೆ ಪಡೆದರು. ಶಿಬಿರದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆ, ಗೊಂದಲಗಳಿಗೆ ಉಪನ್ಯಾಸಕರು ಉತ್ತರಿಸಿದರು.</p>.<p>ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ: </strong>‘ಸ್ಪಧಾತ್ಮಕ ಪರೀಕ್ಷಾ ಸಿದ್ಧತೆಗೆ ‘ಪ್ರಜಾವಾಣಿ’ಯ ಮಾಸ್ಟರ್ ಮೈಂಡ್ ಆನ್ಲೈನ್ ಪತ್ರಿಕೆ ಉಪಯುಕ್ತ’ ಎಂದು ಪ್ರಾಚಾರ್ಯೆ ಸಂಗೀತಾ ಪಾಟೀಲ ತಿಳಿಸಿದರು.</p>.<p>ಮಾಸ್ಟರ್ ಮೈಂಡ್ ಆನ್ಲೈನ್ ಪತ್ರಿಕೆ ಸಹಯೋಗದಲ್ಲಿ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಪತ್ರಿಕೆಯಲ್ಲಿ, ಬಹು ಆಯ್ಕೆಯ ವಸ್ತು ಹಾಗೂ ವಿಷಯನಿಷ್ಠ ಅಂಶಗಳ ಕುರಿತು ಅತ್ಯಂತ ವಿವರವಾಗಿ ಬರೆಯಲಾಗುತ್ತದೆ. ಅಭ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸಲಾಗುತ್ತಿದೆ. ಅಭ್ಯರ್ಥಿಗಳು ಇದನ್ನು ಪ್ರತಿದಿನ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.</p>.<p>ವೀರೇಶ್.ಎನ್ ಮಠಪತಿ ಸ್ಫರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತು ಉಪನ್ಯಾಸ ನೀಡಿದರು. ಪ್ರವೀಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಉಪನ್ಯಾಸಕ ಸೋಮನಾಥ ಪಾಟೀಲ ಮಾತನಾಡಿ,‘ಪ್ರಜಾವಾಣಿ 70 ವರ್ಷಗಳಿಂದ ರಾಜ್ಯದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದೆ. ಪ್ರತಿಭಾನ್ವಿತರಿಗೆ ವೇದಿಕೆಯಾಗಿದೆ’ ಎಂದರು.</p>.<p>ಕನ್ನಡ ಪಂಡಿತ ನೀಲಕಂಠ ಇಸ್ಲಾಮಪುರ್, ಮುಖ್ಯಶಿಕ್ಷಕ ಅಶೋಕ ಮಠಪತಿ ಹಾಗೂ ಆಡಳಿತಾಧಿಕಾರಿ ರಾಜಕುಮಾರ್ ಇದ್ದರು.</p>.<p>ಪದವಿ ಪೂರ್ವ ಹಾಗೂ ಪದವಿಯ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<p>ಸ್ಥಳದಲ್ಲಿಯೇ ಹಲವರು ಮಾಸ್ಟರ್ ಮೈಂಡ್ಚಂದಾದಾರಿಕೆ ಪಡೆದರು. ಶಿಬಿರದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆ, ಗೊಂದಲಗಳಿಗೆ ಉಪನ್ಯಾಸಕರು ಉತ್ತರಿಸಿದರು.</p>.<p>ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>