ತಮ್ಮ ಜನ್ಮದಿನದ ಪ್ರಯುಕ್ತ ಯಾರೂ ಬ್ಯಾನರ್, ಕಟೌಟ್, ಫ್ಲೆಕ್ಸ್, ಅದ್ದೂರಿ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಬಾರದು. ಅದೇ ಹಣದಿಂದ ಗೋಶಾಲೆಗಳಿಗೆ ಮೇವು, ಪ್ರಾಣಿಗಳ ಸಂರಕ್ಷಣೆ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಇತರ ಸಾಮಗ್ರಿಗಳ ವಿತರಣೆ, ಬಡವರು, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನೆರವು ನೀಡಬೇಕು ಎಂದು ಸಚಿವರು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚವಾಣ್ ಅವರ ಜನ್ಮದಿನ ಜುಲೈ 6 ರಂದು ಇದೆ.