<p><strong>ಕಮಲನಗರ</strong>: ತಾಲ್ಲೂಕಿನ ಮುರ್ಕಿ ಗ್ರಾಮದ ರೇಣುಕಾ ಭವಾನಿ ದೇವಿ ಮಂದಿರದಲ್ಲಿ ಬುಧವಾರ ನಡೆದ ಕಳಸಾರೋಹಣ ಮಹೋತ್ಸವದಲ್ಲಿ ಶಾಸಕ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.</p>.<p>ನಂತರ ಮಾತನಾಡಿದ ಅವರು, ಗ್ರಾಮದಲ್ಲಿರುವ ಭವಾನಿ ದೇವಿಯು ಕಷ್ಟವೆಂದು ಬೇಡಿ ಬರುವ ಭಕ್ತರನ್ನು ಕಾಯುತ್ತಾಳೆ. ಗ್ರಾಮದಲ್ಲಿನ ಸಂಕಷ್ಟಗಳನ್ನು ನಿವಾರಿಸಿ ಜನರ ಸುಖಮಯ ಜೀವನಕ್ಕಾಗಿ ಪ್ರಾರ್ಥಿಸಿ ಕಳಸಾರೋಹಣ ಹಾಗೂ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಮುರ್ಕಿ ಗ್ರಾಮದಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ. ಮಂದಿರದ ಅಭಿವೃದ್ಧಿಗೆ ಸಹಕಾರ ಇರುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಎಂದರು.</p>.<p>ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನಾ ತಂಡದವರೊಂದಿಗೆ ಕುಳಿತು ಭಜನಾ ಪದಗಳಿಗಳಿಗೆ ತಾಳ ಹಾಕಿ ಗಮನ ಸೆಳೆದರು.</p>.<p>ಅರ್ಚಕ ಅರ್ಜುನ ಮಹಾರಾಜರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.</p>.<p>ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ಪಾಟೀಲ, ಸಚಿನ ಬಿರಾದಾರ, ಅನೀಲ ಬಿರಾದಾರ, ಸಚಿನ ರಾಠೋಡ, ಸಂತೋಷ ವೀರಶೆಟ್ಡಿ, ಕಾಳಿದಾಸ ಆಡೆ, ಅಶೋಕ ಹಲಮಂಡಗೆ, ದಯಾನಂದ ಕಾಳೆ, ಅಮರ ಠಾಕೂರ, ನಾಗನಾಥ ಸಗರ್, ಸಂತೋಷ ಖಿಂಡಿವಾಲೆ, ದಿಲೀಪ ಚಾಂಡೇಸುರೆ, ಗೋವಿಂದ ಹಿಲಾಲಪೂರೆ, ರಾಜಕುಮಾರ ಬಾರೋಳೆ, ದೀಪಕ ಕುಲಕರ್ಣಿ, ಬಾಲಾಜಿ ಸಗರ್, ವೀರೇಶ ಹಲಮಂಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ತಾಲ್ಲೂಕಿನ ಮುರ್ಕಿ ಗ್ರಾಮದ ರೇಣುಕಾ ಭವಾನಿ ದೇವಿ ಮಂದಿರದಲ್ಲಿ ಬುಧವಾರ ನಡೆದ ಕಳಸಾರೋಹಣ ಮಹೋತ್ಸವದಲ್ಲಿ ಶಾಸಕ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.</p>.<p>ನಂತರ ಮಾತನಾಡಿದ ಅವರು, ಗ್ರಾಮದಲ್ಲಿರುವ ಭವಾನಿ ದೇವಿಯು ಕಷ್ಟವೆಂದು ಬೇಡಿ ಬರುವ ಭಕ್ತರನ್ನು ಕಾಯುತ್ತಾಳೆ. ಗ್ರಾಮದಲ್ಲಿನ ಸಂಕಷ್ಟಗಳನ್ನು ನಿವಾರಿಸಿ ಜನರ ಸುಖಮಯ ಜೀವನಕ್ಕಾಗಿ ಪ್ರಾರ್ಥಿಸಿ ಕಳಸಾರೋಹಣ ಹಾಗೂ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.</p>.<p>ಮುರ್ಕಿ ಗ್ರಾಮದಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ. ಮಂದಿರದ ಅಭಿವೃದ್ಧಿಗೆ ಸಹಕಾರ ಇರುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಎಂದರು.</p>.<p>ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನಾ ತಂಡದವರೊಂದಿಗೆ ಕುಳಿತು ಭಜನಾ ಪದಗಳಿಗಳಿಗೆ ತಾಳ ಹಾಕಿ ಗಮನ ಸೆಳೆದರು.</p>.<p>ಅರ್ಚಕ ಅರ್ಜುನ ಮಹಾರಾಜರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.</p>.<p>ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ಪಾಟೀಲ, ಸಚಿನ ಬಿರಾದಾರ, ಅನೀಲ ಬಿರಾದಾರ, ಸಚಿನ ರಾಠೋಡ, ಸಂತೋಷ ವೀರಶೆಟ್ಡಿ, ಕಾಳಿದಾಸ ಆಡೆ, ಅಶೋಕ ಹಲಮಂಡಗೆ, ದಯಾನಂದ ಕಾಳೆ, ಅಮರ ಠಾಕೂರ, ನಾಗನಾಥ ಸಗರ್, ಸಂತೋಷ ಖಿಂಡಿವಾಲೆ, ದಿಲೀಪ ಚಾಂಡೇಸುರೆ, ಗೋವಿಂದ ಹಿಲಾಲಪೂರೆ, ರಾಜಕುಮಾರ ಬಾರೋಳೆ, ದೀಪಕ ಕುಲಕರ್ಣಿ, ಬಾಲಾಜಿ ಸಗರ್, ವೀರೇಶ ಹಲಮಂಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>