ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಕುಮಾರ ಹೆಬ್ಬಾಳೆ ಅವರು ಇಲ್ಲಿಯ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಮತಯಾಚನೆ ಮಾಡಿದರು.
ಸಂಸ್ಥೆಯ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಹೆಬ್ಬಾಳೆ ಅವರನ್ನು ಬೆಂಬಲಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ ಹಾಲಹಳ್ಳಿ ತಿಳಿಸಿದರು.
ಹೋರಾಟಗಾರ ಓಂಪ್ರಕಾಶ ರೊಟ್ಟೆ ಮಾತನಾಡಿದರು. ದತ್ತು ಪಾಟೀಲ, ಪ್ರಕಾಶ ಕನ್ನಾಳೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಚಂದ್ರಪ್ಪ ಭತಮುರ್ಗೆ, ಪದವಿ ಕಾಲೇಜು ಪ್ರಾಚಾರ್ಯ ಮಾಣಿಕರಾವ್ ಪಾಂಚಾಳ್, ಬಸವರಾಜ ಹೆಗ್ಗೆ, ಗೋಪಾಲರೆಡ್ಡಿ, ಡಾ. ಅಶ್ವಿನಕುಮಾರ, ಧನರಾಜ ಆನೆಕಲೆ, ಶರಣಯ್ಯ ಸ್ವಾಮಿ ಸಿರ್ಸಿ ಇದ್ದರು.