<p><strong>ಬೀದರ್:</strong> ‘ಅತಿ ಹೆಚ್ಚು ಈರುಳ್ಳಿ ಬೆಳೆಸುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ’ ಎಂದು ತೋಟಗಾರಿಕೆ ಕಾಲೇಜಿನ ಡೀನ್ ಎಸ್.ವಿ. ಪಾಟೀಲ ತಿಳಿಸಿದರು.</p>.<p>ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. </p>.<p>‘ಈರುಳ್ಳಿ ಅನನ್ಯ ಮತ್ತು ವರ್ಷಪೂರ್ತಿ ಬೆಳೆಯುವ ಫಸಲಾಗಿದೆ. ಇದು ಆರೊಮ್ಯಾಟಿಕ್ ತರಕಾರಿ ಅಲಿಯಮ್ ಕುಟುಂಬದ ಸದಸ್ಯ ಜಾತಿಗೆ ಸೇರಿದೆ. ಇದರಲ್ಲಿ ಬೆಳ್ಳುಳ್ಳಿ, ಲೀಕ್ಸ್ ಮತ್ತು ಚೀವ್ಸ್ ಸೇರಿದೆ. ಅಸಂಖ್ಯ ಭಾರತೀಯ ಭಕ್ಷ್ಯಗಳಿಗೆ ಇದನ್ನು ಬಳಸಲಾಗುತ್ತದೆ. ಈರುಳ್ಳಿ ಕೃಷಿಯು ಭಾರತದ ಕೃಷಿಯ ಪ್ರಮುಖ ಆಧಾರಸ್ತಂಭವಾಗಿದೆ. ಇದು ಕೃಷಿ ಆರ್ಥಿಕತೆಗೆ ಪ್ರಮುಖ ಕೊಡುಗೆಗಳನ್ನು ನೀಡುತ್ತದೆ’ ಎಂದರು.</p>.<p>‘ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶಗಳು ಈರುಳ್ಳಿ ಬೆಳೆಸುವ ಪ್ರಮುಖ ರಾಜ್ಯಗಳಾಗಿವೆ. ಈರುಳ್ಳಿಯ ವಿಧಗಳು ಅದರ ಹೊರಗಿನ ಬಣ್ಣವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಕೆಂಪು ಈರುಳ್ಳಿ ಗರಿಷ್ಠ ಕೃಷಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಆದರೆ, ಬಿಳಿ ಈರುಳ್ಳಿ ಗಮನಾರ್ಹ ಪ್ರದೇಶ ಮತ್ತು ಮಾರುಕಟ್ಟೆಯ ಪಾಲು ಹೊಂದಿದೆ. ಕೆಂಪು ಈರುಳ್ಳಿಯು ಶ್ರೀಮಂತ ಬಣ್ಣ ಮತ್ತು ಸ್ವಲ್ಪ ಸಿಹಿ ಸುವಾಸನೆಗೆ ಹೆಸರುವಾಸಿಯಾಗಿದೆ. ಈ ಈರುಳ್ಳಿ ಭಾರತೀಯ ಪಾಕ ಪದ್ಧತಿಯಲ್ಲಿ ಪ್ರಧಾನ ಸ್ಥಾನ ಪಡೆದಿದೆ. ಸಲಾಡ್ ಮತ್ತು ಉಪ್ಪಿನಕಾಯಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ಬಿಳಿ ಈರುಳ್ಳಿ ಸೌಮ್ಯ ಪರಿಮಳ ಮತ್ತು ಗರಿಗರಿಯಾದ ವಿನ್ಯಾಸದೊಂದಿಗೆ ಔಷಧೀಯ ಬಳಕೆಗಳಿಗೆ ಜನಪ್ರಿಯವಾಗಿದೆ. ಹಸಿರು ಈರುಳ್ಳಿ, ತಾಜಾ ಈರುಳ್ಳಿಯನ್ನು ಕೊಯ್ಲು ಮಾಡಿ ಮತ್ತು ಅವುಗಳ ಎಲೆಗಳೊಂದಿಗೆ ಒಣಗಿಸದೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಇತರ ಭಕ್ಷ್ಯಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ರೈತರು ನುರಿತ ತಜ್ಞರಿಂದ ಉತ್ತಮ ಗುಣಮಟ್ಟದ ಬೀಜವನ್ನು ಪಡೆದು ಹೆಚ್ಚಿನ ಇಳುವರಿಯೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು’ ಎಂದು ಹೇಳಿದರು. </p>.<p>ಭಾಲ್ಕಿ ಸಹಾಯಕ ತೋಟಗಾರಿಕೆ ಅಧಿಕಾರಿ ಓಂಪ್ರಕಾಶ ಮೋರೆ, ಅಂಬ್ರೇಶ, ಅರುಣಕುಮಾರ ಕೆ.ಟಿ., ಅರವಿಂದಕುಮಾರ, ಪ್ರಗತಿಪರ ರೈತರಾದ ಚಂದ್ರಶೇಖರ ಸಂಗಪ್ಪ ಮಾಲಿಪಾಟೀಲ, ವಿಸ್ತರಣಾ ಮುಂದಾಳು ವಿ.ಪಿ. ಸಿಂಗ್, ಬೀದರ್ ಜಿಲ್ಲೆಯ 100 ಪ್ರಗತಿಪರ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ಅತಿ ಹೆಚ್ಚು ಈರುಳ್ಳಿ ಬೆಳೆಸುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ’ ಎಂದು ತೋಟಗಾರಿಕೆ ಕಾಲೇಜಿನ ಡೀನ್ ಎಸ್.ವಿ. ಪಾಟೀಲ ತಿಳಿಸಿದರು.</p>.<p>ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. </p>.<p>‘ಈರುಳ್ಳಿ ಅನನ್ಯ ಮತ್ತು ವರ್ಷಪೂರ್ತಿ ಬೆಳೆಯುವ ಫಸಲಾಗಿದೆ. ಇದು ಆರೊಮ್ಯಾಟಿಕ್ ತರಕಾರಿ ಅಲಿಯಮ್ ಕುಟುಂಬದ ಸದಸ್ಯ ಜಾತಿಗೆ ಸೇರಿದೆ. ಇದರಲ್ಲಿ ಬೆಳ್ಳುಳ್ಳಿ, ಲೀಕ್ಸ್ ಮತ್ತು ಚೀವ್ಸ್ ಸೇರಿದೆ. ಅಸಂಖ್ಯ ಭಾರತೀಯ ಭಕ್ಷ್ಯಗಳಿಗೆ ಇದನ್ನು ಬಳಸಲಾಗುತ್ತದೆ. ಈರುಳ್ಳಿ ಕೃಷಿಯು ಭಾರತದ ಕೃಷಿಯ ಪ್ರಮುಖ ಆಧಾರಸ್ತಂಭವಾಗಿದೆ. ಇದು ಕೃಷಿ ಆರ್ಥಿಕತೆಗೆ ಪ್ರಮುಖ ಕೊಡುಗೆಗಳನ್ನು ನೀಡುತ್ತದೆ’ ಎಂದರು.</p>.<p>‘ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶಗಳು ಈರುಳ್ಳಿ ಬೆಳೆಸುವ ಪ್ರಮುಖ ರಾಜ್ಯಗಳಾಗಿವೆ. ಈರುಳ್ಳಿಯ ವಿಧಗಳು ಅದರ ಹೊರಗಿನ ಬಣ್ಣವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಕೆಂಪು ಈರುಳ್ಳಿ ಗರಿಷ್ಠ ಕೃಷಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಆದರೆ, ಬಿಳಿ ಈರುಳ್ಳಿ ಗಮನಾರ್ಹ ಪ್ರದೇಶ ಮತ್ತು ಮಾರುಕಟ್ಟೆಯ ಪಾಲು ಹೊಂದಿದೆ. ಕೆಂಪು ಈರುಳ್ಳಿಯು ಶ್ರೀಮಂತ ಬಣ್ಣ ಮತ್ತು ಸ್ವಲ್ಪ ಸಿಹಿ ಸುವಾಸನೆಗೆ ಹೆಸರುವಾಸಿಯಾಗಿದೆ. ಈ ಈರುಳ್ಳಿ ಭಾರತೀಯ ಪಾಕ ಪದ್ಧತಿಯಲ್ಲಿ ಪ್ರಧಾನ ಸ್ಥಾನ ಪಡೆದಿದೆ. ಸಲಾಡ್ ಮತ್ತು ಉಪ್ಪಿನಕಾಯಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ಬಿಳಿ ಈರುಳ್ಳಿ ಸೌಮ್ಯ ಪರಿಮಳ ಮತ್ತು ಗರಿಗರಿಯಾದ ವಿನ್ಯಾಸದೊಂದಿಗೆ ಔಷಧೀಯ ಬಳಕೆಗಳಿಗೆ ಜನಪ್ರಿಯವಾಗಿದೆ. ಹಸಿರು ಈರುಳ್ಳಿ, ತಾಜಾ ಈರುಳ್ಳಿಯನ್ನು ಕೊಯ್ಲು ಮಾಡಿ ಮತ್ತು ಅವುಗಳ ಎಲೆಗಳೊಂದಿಗೆ ಒಣಗಿಸದೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಇತರ ಭಕ್ಷ್ಯಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ರೈತರು ನುರಿತ ತಜ್ಞರಿಂದ ಉತ್ತಮ ಗುಣಮಟ್ಟದ ಬೀಜವನ್ನು ಪಡೆದು ಹೆಚ್ಚಿನ ಇಳುವರಿಯೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು’ ಎಂದು ಹೇಳಿದರು. </p>.<p>ಭಾಲ್ಕಿ ಸಹಾಯಕ ತೋಟಗಾರಿಕೆ ಅಧಿಕಾರಿ ಓಂಪ್ರಕಾಶ ಮೋರೆ, ಅಂಬ್ರೇಶ, ಅರುಣಕುಮಾರ ಕೆ.ಟಿ., ಅರವಿಂದಕುಮಾರ, ಪ್ರಗತಿಪರ ರೈತರಾದ ಚಂದ್ರಶೇಖರ ಸಂಗಪ್ಪ ಮಾಲಿಪಾಟೀಲ, ವಿಸ್ತರಣಾ ಮುಂದಾಳು ವಿ.ಪಿ. ಸಿಂಗ್, ಬೀದರ್ ಜಿಲ್ಲೆಯ 100 ಪ್ರಗತಿಪರ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>