ಬಸವಕಲ್ಯಾಣ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ನಲ್ಲಿ ಸಾಗಿಸುತ್ತಿದ್ದ ₹17.50 ಲಕ್ಷ ಮೌಲ್ಯದ ಅಫೀಮನ್ನು ತಾಲ್ಲೂಕಿನ ಮಂಠಾಳ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ಚೆನ್ನೈಗೆ ಸಾಗಿಸುತ್ತಿದ್ದ ಮಾಹಿತಿಯ ಮೇರೆಗೆ ಮನ್ನಳ್ಳಿ ಚೆಕ್ಪೋಸ್ಟ್ ಬಳಿ ಕಂಟೇನರ್ ಪರಿಶೀಲಿಸಿದಾಗ 17 ಕೆ.ಜಿ.ಅಫೀಮು ಪತ್ತೆಯಾಗಿದೆ. ಆರೋಪಿ ಕವಾಯಿ ರಾಮ್ನನ್ನು ಬಂಧಿಸಲಾಗಿದೆ. ಆತನಿಂದ ಮೊಬೈಲ್ ಮತ್ತು ಕಂಟೇನರ್ ವಶಕ್ಕೆ ಪಡೆಯಲಾಗಿದೆ.
ಸಿಪಿಐ ಕೃಷ್ಣಕುಮಾರ ನೇತೃತ್ವದಲ್ಲಿ ದಾಳಿ ನಡೆದಿದೆ. ಪೊಲೀಸ್ ಸಿಬ್ಬಂದಿ ಶಿವಾನಂದ, ಅನಿಲ, ಪ್ರತಾಪ, ತಾತೇರಾವ್, ವೆಂಕಟ, ಶಿವಕುಮಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.