ಮಹಿಳಾ ಆಯೋಗ ಕೇಳುವ ನೋಟಿಸ್ ಎಲ್ಲ ಪ್ರಶ್ನೆಗಳಿಗೆ ಸಾಕ್ಷ್ಯ ಸಮೇತ ಉತ್ತರ ಕೊಡುವೆ
ಪ್ರಭು ಚವಾಣ್ ಶಾಸಕ
‘ಬೆಡ್ರೂಮ್ವರೆಗೆ ರಾಜಕೀಯ’
‘ರಾಜಕೀಯ ಎನ್ನುವುದು ಒಂದು ಹಂತದ ವರೆಗೆ ಇರಬೇಕು. ಆದರೆ ಮನೆ ತನಕ ಬೆಡ್ ರೂಮ್ ವರೆಗೆ ರಾಜಕೀಯ ಬರಬಾರದು’ ಎಂದು ಪ್ರಭು ಚವಾಣ್ ಹೇಳಿದರು.‘2014-15ರಿಂದ ಒಂದಿಲ್ಲೊಂದು ಕಾರಣದಿಂದ ನನ್ನ ಎಲ್ಲ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಬಹಳ ನೊಂದಿದ್ದೇನೆ. ನಾನು ಎಂದೂ ಶಾಸಕನಂತೆ ನಡೆದುಕೊಂಡಿಲ್ಲ ಜನಸೇವಕನಾಗಿ ಜನರ ನಡುವೆ ಇದ್ದೇನೆ’ ಎಂದರು. ನಿಮ್ಮ ಹಾಗೂ ಭಗವಂತ ಖೂಬಾ ನಡುವಿನ ದ್ವೇಷಕ್ಕೆ ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದನ್ನು ಖೂಬಾ ಅವರೇ ಹೇಳಬೇಕು ಎಂದು ತಿಳಿಸಿದರು.