ಸಂಧ್ಯಾಸುರಕ್ಷಾ, ಬಸ್ ನಿಲ್ದಾಣ, ಸಾರ್ವಜನಿಕರ ಸ್ಮಶಾನ ಭೂಮಿ, ತಾಲ್ಲೂಕು ಕೇಂದ್ರದಿಂದ ಮುಚಳಂಬ ರಸ್ತೆ ಡಾಂಬರೀಕರಣ, ರೈತರ ಜಮೀನು ಒತ್ತುವರಿ, ಪಟ್ಟಾದಾರಿಕೆ ಬದಲಾಣೆ, ಡಿಡಿಎಲ್ಆರ್, ಗ್ರಾಮಗಳ ರಸ್ತೆ ನಿರ್ಮಾಣ, ಆಂಬುಲೆನ್ಸ್ ಹಾಗೂ ಮಹಿಳಾ ವೈದ್ಯಾಧಿಕಾರಿ ನೇಮಕ, ಸೇತುವೆ ನಿರ್ಮಾಣ ಕುರಿತು ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ರವಾನೆ ಮಾಡಿ ಪರಿಹಾರ ನೀಡುವಂತೆ ಆದೇಶ ಮಾಡಿದರು. ಸೋಲದಾಬಕಾ ಗ್ರಾಮದ ಮಹಿಳೆಯರು ಜಿಲ್ಲಾ ಅಧಿಕಾರಿಯವರನ್ನು ಭೇಟಿ ಯಾಗಿ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವುದರಿಂದ ತಮಗಾಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಗಂಡಸರು ಮನೆಯಲ್ಲಿನ ಆಭರಣ, ಪಾತ್ರೆಗಳನ್ನು ಅಡವು ಇಟ್ಟು ಸಾರಾಯಿ ಕುಡಿಯುತ್ತಾರೆ. ಕುಡಿದ ನಶೆಯಲ್ಲಿ ಪ್ರತಿದಿನವೂ ಮನೆಯಲ್ಲಿ ಜಗಳ ಆಡುತ್ತಾರೆ. ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಗೋಳು ತೋಡಿಕೊಂಡರು.