ಕೆಲ ಜನಪ್ರತಿನಿಧಿಗಳ ವಿರೋಧದ ಕಾರಣ ಬೀದರ್-ಯಶವಂತಪುರ ವಯಾ ಕಲಬುರಗಿ ರೈಲು ಸಂಚಾರ ತಡೆ ಹಿಡಿಯಲಾಗಿದೆ. ಸದ್ಯದ
ಮಾರ್ಗದಲ್ಲಿ 3 ಗಂಟೆ ಹೆಚ್ಚು ಅವಧಿ ಹಿಡಿಯುತ್ತಿದೆ. ಕಾರಣ, ಪ್ರಯಾಣಿಕರ ಹಿತದೃಷ್ಟಿಯಿಂದ ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರೆ, ವಿಜಯಕುಮಾರ ಐಹೊಳೆ, ಜೈಪ್ರಕಾಶ ಅಷ್ಟೂರೆ, ಜೈಭೀಮ ಕಾಳೇಕರ್, ಬಸವರಾಜ ಭಾವಿದೊಡ್ಡಿ, ಆಕಾಶ್ ಸಿಂಧೆ, ಸಂಗಮೇಶ ಬಾವಿದೊಡ್ಡಿ, ತುಕಾರಾಮ ಹಸನಮುಖಿ, ಮಹೇಂದ್ರಕುಮಾರ ಹೊಸಮನಿ, ಕುಪೇಂದ್ರ ಶರ್ಮಾ, ಖಾಜಾ ಮೈನೊದ್ದಿನ್, ಅನಿಲ್ ಕಾಂಬಳೆ, ಆಕಾಶ ಕಾಂಬಳೆ, ರತಿಕಾಂತ, ನಾಗೇಶ ಮೇತ್ರೆ ಪಾಲ್ಗೊಂಡಿದ್ದರು.