<p><strong>ಬೀದರ್</strong>: ‘ರೇಬಿಸ್ನಿಂದ ದೇಶದಲ್ಲಿ ಪ್ರತಿ ವರ್ಷ 20,562 ಮಂದಿ ಸಾವನ್ನಪ್ಪುತ್ತಿದ್ದಾರೆ’ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ ತಿಳಿಸಿದರು.</p>.<p>ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ವಾರ್ಷಿಕ ಸಾವುಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ 40ರಷ್ಟಿದೆ’ ಎಂದರು.</p>.<p>‘ದೇಶದಲ್ಲಿ ನಾಯಿ ಕಡಿತವೇ ರೇಬಿಸ್ಗೆ ಪ್ರಮುಖ ಕಾರಣವಾಗಿದೆ. ಮಾರಣಾಂತಿಕ ರೇಬಿಸ್ ವೈರಸ್ ಮನುಷ್ಯನ ಮೆದುಳು ಹಾಗೂ ನರ ಮಂಡಲಕ್ಕೆ ಹಾನಿ ಉಂಟು ಮಾಡುತ್ತದೆ’ ಎಂದು ಹೇಳಿದರು.</p>.<p>‘ನಾಯಿ ಸೇರಿದಂತೆ ಸೋಂಕಿತ ಪ್ರಾಣಿ ಕಚ್ಚುವುದು, ಜೊಲ್ಲು, ಉಗುಳಿನ ಸಂಪರ್ಕದಿಂದ ರೇಬಿಸ್ ಹರಡುತ್ತದೆ. ಪ್ರಾಣಿಗಳಲ್ಲಿ ಅಸಾಮಾನ್ಯ ಆಕ್ರಮಣಶೀಲತೆ, ಹೆದರಿಕೆ, ಅತಿಯಾಗಿ ಜೊಲ್ಲು ಸೋರುವಿಕೆ, ನುಂಗಲು ತೊಂದರೆ, ನೀರು ನೋಡಿ ಹೆದರುವುದು, ಅಂಗವೈಕಲ್ಯ ರೋಗದ ಲಕ್ಷಣಗಳಾಗಿವೆ’ ಎಂದು ತಿಳಿಸಿದರು.</p>.<p>‘ರೇಬಿಸ್ ತಡೆಗಟ್ಟಲು ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ನೀಡಬೇಕು. ಅಲೆದಾಡುವ, ಕಾಡು ಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಪ್ರಾಣಿಗಳ ಅನುಮಾನಾಸ್ಪದ ವರ್ತನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಾಣಿ ಕಚ್ಚಿದರೆ ಅಥವಾ ಪರಚಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಆರ್.ಡಿ.ಸಿಂಗ್, ಪ್ರಾಚಾರ್ಯೆ ವೀಣಾ ಸೋರಗಾವಿ, ಯೋಗೇಂದ್ರ ಕುಲಕರ್ಣಿ, ವಿಕ್ರಮ ಚಾಕೋತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ರೇಬಿಸ್ನಿಂದ ದೇಶದಲ್ಲಿ ಪ್ರತಿ ವರ್ಷ 20,562 ಮಂದಿ ಸಾವನ್ನಪ್ಪುತ್ತಿದ್ದಾರೆ’ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ ತಿಳಿಸಿದರು.</p>.<p>ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ವಾರ್ಷಿಕ ಸಾವುಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ 40ರಷ್ಟಿದೆ’ ಎಂದರು.</p>.<p>‘ದೇಶದಲ್ಲಿ ನಾಯಿ ಕಡಿತವೇ ರೇಬಿಸ್ಗೆ ಪ್ರಮುಖ ಕಾರಣವಾಗಿದೆ. ಮಾರಣಾಂತಿಕ ರೇಬಿಸ್ ವೈರಸ್ ಮನುಷ್ಯನ ಮೆದುಳು ಹಾಗೂ ನರ ಮಂಡಲಕ್ಕೆ ಹಾನಿ ಉಂಟು ಮಾಡುತ್ತದೆ’ ಎಂದು ಹೇಳಿದರು.</p>.<p>‘ನಾಯಿ ಸೇರಿದಂತೆ ಸೋಂಕಿತ ಪ್ರಾಣಿ ಕಚ್ಚುವುದು, ಜೊಲ್ಲು, ಉಗುಳಿನ ಸಂಪರ್ಕದಿಂದ ರೇಬಿಸ್ ಹರಡುತ್ತದೆ. ಪ್ರಾಣಿಗಳಲ್ಲಿ ಅಸಾಮಾನ್ಯ ಆಕ್ರಮಣಶೀಲತೆ, ಹೆದರಿಕೆ, ಅತಿಯಾಗಿ ಜೊಲ್ಲು ಸೋರುವಿಕೆ, ನುಂಗಲು ತೊಂದರೆ, ನೀರು ನೋಡಿ ಹೆದರುವುದು, ಅಂಗವೈಕಲ್ಯ ರೋಗದ ಲಕ್ಷಣಗಳಾಗಿವೆ’ ಎಂದು ತಿಳಿಸಿದರು.</p>.<p>‘ರೇಬಿಸ್ ತಡೆಗಟ್ಟಲು ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ನೀಡಬೇಕು. ಅಲೆದಾಡುವ, ಕಾಡು ಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಪ್ರಾಣಿಗಳ ಅನುಮಾನಾಸ್ಪದ ವರ್ತನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಾಣಿ ಕಚ್ಚಿದರೆ ಅಥವಾ ಪರಚಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಆರ್.ಡಿ.ಸಿಂಗ್, ಪ್ರಾಚಾರ್ಯೆ ವೀಣಾ ಸೋರಗಾವಿ, ಯೋಗೇಂದ್ರ ಕುಲಕರ್ಣಿ, ವಿಕ್ರಮ ಚಾಕೋತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>