<p><strong>ನವದೆಹಲಿ:</strong> ಇದೇ 12ರಂದು ನಡೆಯಲಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ವಿಶೇಷ ಮಹಾಸಭೆಯಲ್ಲಿ ಕರಡು ನಿಯಮಾವಳಿ ಅಂಗೀಕಾರಗೊಂಡರೆ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಬಹುಪಾಲು ಸದಸ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. </p><p>ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ರೂಪಿಸಲಾಗಿರುವ ಕರಡು ನಿಯಮಾವಳಿಯನ್ನು ಅಂಗೀಕರಿಸಲು ಫೆಡರೇಷನ್ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ. ಹೊಸ ನಿಯಮಾವಳಿ ಯನ್ನು ಅಕ್ಟೋಬರ್ 30ರೊಳಗೆ ಅಂಗೀಕರಿಸುವಂತೆ ಫಿಫಾ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ ಗಡುವು ವಿಧಿಸಿದೆ.</p><p>ವಿಶೇಷ ಸಭೆಯಲ್ಲಿ ಕರಡು ನಿಯಮಾವಳಿಯನ್ನು ಅಂಗೀಕರಿಸಿದರೆ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡ ಬೇಕಾಗಬಹುದು ಇಲ್ಲವೇ ರಾಜ್ಯ ಘಟಕಗಳಲ್ಲಿನ ತಮ್ಮ ಉನ್ನತ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ. </p><p>ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಈ ನಿಯಮಾವಳಿ ರೂಪಿಸಿದ್ದು, ಸುಪ್ರೀಂ ಕೋರ್ಟ್ ಇದಕ್ಕೆ ಕೆಲವು ಮಾರ್ಪಾಡುಗಳೊಂದಿಗೆ ಸೆ.19ರಂದು ಸಮ್ಮತಿ ನೀಡಿತ್ತು. ನಾಲ್ಕು ವಾರಗಳ ಒಳಗೆ ಸರ್ವ ಸದಸ್ಯರ ಸಭೆ ಕರೆದು ಇದನ್ನು ಅಂಗೀಕರಿಸುವಂತೆ ಎಐಎಫ್ಎಫ್ಗೆ ನಿರ್ದೇಶನವನ್ನೂ ನೀಡಿತ್ತು.</p><p>ಆದರೆ ಕರಡು ನಿಯಮಾವಳಿಯಲ್ಲಿನ ಒಂದು ನಿರ್ದಿಷ್ಟ ಷರತ್ತು ಎಐಎಫ್ಎಫ್ನ ಉನ್ನತ ಅಧಿಕಾರಿಗಳಿಗೆ ತಲೆನೋವು ಉಂಟು ಮಾಡಿದೆ. ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ರಾಜ್ಯ ಘಟಕಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವುದೇ ಇದಕ್ಕೆ ಕಾರಣ. </p><p>ಕರಡು ನಿಯಮಾವಳಿಯ 25.3ನೇ (ಸಿ) ವಿಧಿಯ ಪ್ರಕಾರ, ‘ಒಬ್ಬ ವ್ಯಕ್ತಿಯು ಎಐಎಫ್ಎಫ್ನ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ರಾಜ್ಯ ಸಂಸ್ಥೆಯಲ್ಲಿ ಪದಾಧಿಕಾರಿ ಸ್ಥಾನವನ್ನು ಹೊಂದಿದ್ದರೆ ಅವರು ಸ್ವಯಂಚಾಲಿತವಾಗಿ ರಾಜ್ಯ ಘಟಕದಲ್ಲಿ ತಮ್ಮ ಸ್ಥಾನ ತೆರವು ಮಾಡಿದಂತೆ’ ಎಂದು ಪರಿಗಣಿಸಲಾಗುತ್ತದೆ.</p><p>ಆದಾಗ್ಯೂ, ಅವರು ವಿಶೇಷ ಮಹಾಸಭೆಗೆ ಮುಂಚಿತವಾಗಿ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ರಾಜ್ಯ ಘಟಕಗಳಲ್ಲಿನ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವ ಅವಕಾಶವಿದೆ.</p><p>ಆದರೆ, ಈ ನಿರ್ದಿಷ್ಟ ಷರತ್ತು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರು ಯಾವುದೇ ರಾಜ್ಯ ಘಟಕದ ಪದಾಧಿಕಾರಿಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಇದೇ 12ರಂದು ನಡೆಯಲಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ವಿಶೇಷ ಮಹಾಸಭೆಯಲ್ಲಿ ಕರಡು ನಿಯಮಾವಳಿ ಅಂಗೀಕಾರಗೊಂಡರೆ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಬಹುಪಾಲು ಸದಸ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. </p><p>ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ರೂಪಿಸಲಾಗಿರುವ ಕರಡು ನಿಯಮಾವಳಿಯನ್ನು ಅಂಗೀಕರಿಸಲು ಫೆಡರೇಷನ್ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ. ಹೊಸ ನಿಯಮಾವಳಿ ಯನ್ನು ಅಕ್ಟೋಬರ್ 30ರೊಳಗೆ ಅಂಗೀಕರಿಸುವಂತೆ ಫಿಫಾ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ ಗಡುವು ವಿಧಿಸಿದೆ.</p><p>ವಿಶೇಷ ಸಭೆಯಲ್ಲಿ ಕರಡು ನಿಯಮಾವಳಿಯನ್ನು ಅಂಗೀಕರಿಸಿದರೆ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡ ಬೇಕಾಗಬಹುದು ಇಲ್ಲವೇ ರಾಜ್ಯ ಘಟಕಗಳಲ್ಲಿನ ತಮ್ಮ ಉನ್ನತ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ. </p><p>ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಈ ನಿಯಮಾವಳಿ ರೂಪಿಸಿದ್ದು, ಸುಪ್ರೀಂ ಕೋರ್ಟ್ ಇದಕ್ಕೆ ಕೆಲವು ಮಾರ್ಪಾಡುಗಳೊಂದಿಗೆ ಸೆ.19ರಂದು ಸಮ್ಮತಿ ನೀಡಿತ್ತು. ನಾಲ್ಕು ವಾರಗಳ ಒಳಗೆ ಸರ್ವ ಸದಸ್ಯರ ಸಭೆ ಕರೆದು ಇದನ್ನು ಅಂಗೀಕರಿಸುವಂತೆ ಎಐಎಫ್ಎಫ್ಗೆ ನಿರ್ದೇಶನವನ್ನೂ ನೀಡಿತ್ತು.</p><p>ಆದರೆ ಕರಡು ನಿಯಮಾವಳಿಯಲ್ಲಿನ ಒಂದು ನಿರ್ದಿಷ್ಟ ಷರತ್ತು ಎಐಎಫ್ಎಫ್ನ ಉನ್ನತ ಅಧಿಕಾರಿಗಳಿಗೆ ತಲೆನೋವು ಉಂಟು ಮಾಡಿದೆ. ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ರಾಜ್ಯ ಘಟಕಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವುದೇ ಇದಕ್ಕೆ ಕಾರಣ. </p><p>ಕರಡು ನಿಯಮಾವಳಿಯ 25.3ನೇ (ಸಿ) ವಿಧಿಯ ಪ್ರಕಾರ, ‘ಒಬ್ಬ ವ್ಯಕ್ತಿಯು ಎಐಎಫ್ಎಫ್ನ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ರಾಜ್ಯ ಸಂಸ್ಥೆಯಲ್ಲಿ ಪದಾಧಿಕಾರಿ ಸ್ಥಾನವನ್ನು ಹೊಂದಿದ್ದರೆ ಅವರು ಸ್ವಯಂಚಾಲಿತವಾಗಿ ರಾಜ್ಯ ಘಟಕದಲ್ಲಿ ತಮ್ಮ ಸ್ಥಾನ ತೆರವು ಮಾಡಿದಂತೆ’ ಎಂದು ಪರಿಗಣಿಸಲಾಗುತ್ತದೆ.</p><p>ಆದಾಗ್ಯೂ, ಅವರು ವಿಶೇಷ ಮಹಾಸಭೆಗೆ ಮುಂಚಿತವಾಗಿ ಫೆಡರೇಷನ್ನ ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ರಾಜ್ಯ ಘಟಕಗಳಲ್ಲಿನ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವ ಅವಕಾಶವಿದೆ.</p><p>ಆದರೆ, ಈ ನಿರ್ದಿಷ್ಟ ಷರತ್ತು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರು ಯಾವುದೇ ರಾಜ್ಯ ಘಟಕದ ಪದಾಧಿಕಾರಿಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>