ಈ ಸಲ ಕೆಲ ರೈತರು ಎಳ್ಳು ಕೂಡ ಬಿತ್ತಿದ್ದಾರೆ. ಇದಲ್ಲದೆ, ವಾಡಿಕೆಯಂತೆ ತೊಗರಿ, ಸಜ್ಜೆಯೂ ಬೆಳೆದಿದ್ದಾರೆ. ಅವುಗಳಿಗೆ ಮಳೆ ಕೊರತೆ ಆಗಿದೆ. ಜಮೀನಿನಲ್ಲಿ ತೇವಾಂಶ ಇಲ್ಲದ್ದರಿಂದ ಎಳ್ಳು, ತೊಗರಿಗೆ ಹಾನಿಯಾಗಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಕಾಯಿ ಕಟ್ಟುವ ಪ್ರಕ್ರಿಯೆಯೂ ವಿಳಂಬ ಗತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಬಾವಿ, ಕೊಳವೆ ಬಾವಿ ಸೌಲಭ್ಯ ಇರುವವರು ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಕೆಲವರು ಟ್ಯಾಂಕರ್ ಮೂಲಕವೂ ಜಮೀನಿಗೆ ನೀರು ಉಣಿಸುತ್ತಿರುವುದು ಕಾಣುತ್ತಿದೆ. ಸಸ್ತಾಪುರದ ರೈತ ಭಗವಾನ ಅವರ ಹೊಲದಲ್ಲಿನ ಎಳ್ಳು ಒಣಗುತ್ತಿದ್ದ ಕಾರಣ ಟ್ಯಾಂಕರ್ ನಿಂದ ನೀರು ಹರಿಸಲಾಗಿದೆ ಎಂದು ರೈತ ಸಂಘದ ಮಂಠಾಳ ಹೋಬಳಿ ಘಟಕದ ಅಧ್ಯಕ್ಷ ಅನಿಲ ಮರ್ಪಳ್ಳೆ ಹೇಳಿದ್ದಾರೆ.