<p>ಹುಮನಾಬಾದ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಅನೇಕ ಜನರಿಗೆ ಬೆದರಿಕೆ ಹಾಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಒತ್ತಾಯಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಶಾಸಕರಿಗೆ ಸಂಬಂಧಿಸಿದ ನಾಗೇಶ್ವರಿ ಹೋಟೆಲ್ನಲ್ಲಿ ಪೊಲೀಸರು ತನಿಖೆ ಮಾಡಿದರೆ. ಇವರು ಇಲ್ಲಿಯವರೆಗೆ ಎಷ್ಟು ಜನರಿಗೆ ಹೊಡೆದಿದ್ದಾರೆ ಎಂಬ ಸತ್ಯ ಹೊರಬರಲಿದೆ ಎಂದರು.</p>.<p>ಕಠಳ್ಳಿ ಗ್ರಾಮದಲ್ಲಿ ರಾಜರೆಡ್ಡಿ ಎಂಬುವವರು ಜೆಜೆಎಂ ಕಾಮಗಾರಿ ಮಾಡುತ್ತಿದ್ದಾರೆ. ಇವರು ಹಳೇ ಟ್ಯಾಂಕರಿಗೆ ಹೊಸ ಟ್ಯಾಂಕರ್ ನಿರ್ಮಾಣ ಎಂದು ಹೇಗೆ ಬರೆದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತ ಬಸವರಾಜ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆಯೂ ಸಹ ನಮ್ಮ ಪಕ್ಷದ ಯೂಥ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಉಮೇಶ್ ಜಮಗಿ ಅವರ ಮೇಲೂ ಹಲ್ಲೆ ಮಾಡಿದ್ದರು. ಈ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಾವು ಸಹ ಪ್ರತಿ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಚ್ಚರಿಸಿದರು.</p>.<p><strong>ಕಠಳ್ಳಿ ಬಸವರಾಜ್ ಪ್ರಕರಣ ಎಸ್ಐಟಿಗೆ ನೀಡಬೇಕು: ಶಾಸಕ ಡಾ.ಸಿದ್ದಲಿಂಗಪ್ಪ</strong> </p><p>ಪಾಟೀಲ ಹಾಗೂ ಅವರ ಸಹೋದರರಿಂದ ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈಚೆಗೆ ಕಠಳ್ಳಿ ಗ್ರಾಮದ ಬಸವರಾಜ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯ ಪ್ರಮುಖ ಆರೋಪಿಗಳನ್ನು ಬಿಟ್ಟು ಬೇರೆ ಅವರಿಗೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಸಹ ಬಂಧಿಸುತ್ತಿಲ್ಲ. ಇನ್ನು ನಾಲ್ಕು ದಿನಗಳಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿ ಈ ಪ್ರಕರಣ ಎಸ್ಐಟಿಗೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.</p>.<p><strong>ಕಾರ್ಖಾನೆಗಳಿಂದ ಶಾಸಕರಿಗೆ ಹಣ ಫಿಕ್ಸಿಂಗ್:</strong> ಚುನಾವಣೆ ಸಂದರ್ಭದಲ್ಲಿ ಶಾಸಕರು ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಕೆಲವು ಕೆಮಿಕಲ್ ಕಾರ್ಖಾನೆಗಳು ಶಾಶ್ವತವಾಗಿ ಬಂದ್ ಮಾಡುತ್ತೇನೆ ಎಂದು ಹೇಳಿದ್ದರು. ಕೇವಲ ಎರಡ್ಮೂರು ತಿಂಗಳು ಅಷ್ಟೇ ಬಂದಾಗಿದ್ದ ಕಾರ್ಖಾನೆಗಳು ಈಗ ಮತ್ತೆ ಆರಂಭ ಆಗಿವೆ. ಈ ಹಿಂದೆ ನಡೆದ ಹುಮನಾಬಾದ್ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಇಲ್ಲಿಯ ಒಂದೊಂದು ಕಾರ್ಖಾನೆಗಳಿಂದ ₹2 ಲಕ್ಷವನ್ನು ಶಾಸಕರು ಪಡೆದುಕೊಂಡಿದ್ದಾರೆ ಎಂದು ರಾಜಶೇಖರ ಪಾಟೀಲ ಆರೋಪಿಸಿದರು.</p>.<p><strong>ತಪ್ಪು ಇಲ್ಲದಿದ್ದರೆ ಹೊರ ಬನ್ನಿ:</strong> ಕಠಳ್ಳಿಯ ಬಸವರಾಜ ಅವರಿಗೆ ನನ್ನ ಸಹೋದರರು ಹಲ್ಲೆ ಮಾಡಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ. ಹಲ್ಲೆ ಮಾಡದಿದ್ದರೆ ನಿಮ್ಮ ಸಹೋದರರಿಗೆ ಹೊರಗೆ ಓಡಾಡಲು ಹೇಳಿ. ಮತ್ತೆ ಏಕೆ ಪರಾರಿಯಾಗಿದ್ದಾರೆ. ಈ ಪ್ರಕರಣ ಆಗಿ 20ದಿನಗಳು ಕಳೆಯುತ್ತಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇವರ ಬಂಧನಕ್ಕೆ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.</p>.<p>ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಜಿ.ಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ರಮೇಶ ಡಾಕುಳಗಿ, ಬಾಬು ಟೈಗರ್, ಶ್ರೀಮಂತ ಪಾಟೀಲ ತಾಳಮಡಗಿ, ದತ್ತಕುಮಾರ ಚಿದ್ರಿ, ಅಣ್ಯೆಪ್ಪ ವರನಾಳ , ದಿಲೀಪ್ ಕುಮಾರ್ ಬಗದಲ್ಕರ್, ಓಂಕಾರ ತುಂಬಾ, ಅಫ್ಸರ್ ಮಿಯ್ಯಾ, ಉಮೇಶ್ ಜಮಗಿ, ವೀರಪ್ಪ ಧುಮ್ಮನಸೂರ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಮನಾಬಾದ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಅನೇಕ ಜನರಿಗೆ ಬೆದರಿಕೆ ಹಾಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಒತ್ತಾಯಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಶಾಸಕರಿಗೆ ಸಂಬಂಧಿಸಿದ ನಾಗೇಶ್ವರಿ ಹೋಟೆಲ್ನಲ್ಲಿ ಪೊಲೀಸರು ತನಿಖೆ ಮಾಡಿದರೆ. ಇವರು ಇಲ್ಲಿಯವರೆಗೆ ಎಷ್ಟು ಜನರಿಗೆ ಹೊಡೆದಿದ್ದಾರೆ ಎಂಬ ಸತ್ಯ ಹೊರಬರಲಿದೆ ಎಂದರು.</p>.<p>ಕಠಳ್ಳಿ ಗ್ರಾಮದಲ್ಲಿ ರಾಜರೆಡ್ಡಿ ಎಂಬುವವರು ಜೆಜೆಎಂ ಕಾಮಗಾರಿ ಮಾಡುತ್ತಿದ್ದಾರೆ. ಇವರು ಹಳೇ ಟ್ಯಾಂಕರಿಗೆ ಹೊಸ ಟ್ಯಾಂಕರ್ ನಿರ್ಮಾಣ ಎಂದು ಹೇಗೆ ಬರೆದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತ ಬಸವರಾಜ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆಯೂ ಸಹ ನಮ್ಮ ಪಕ್ಷದ ಯೂಥ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಉಮೇಶ್ ಜಮಗಿ ಅವರ ಮೇಲೂ ಹಲ್ಲೆ ಮಾಡಿದ್ದರು. ಈ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಾವು ಸಹ ಪ್ರತಿ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಚ್ಚರಿಸಿದರು.</p>.<p><strong>ಕಠಳ್ಳಿ ಬಸವರಾಜ್ ಪ್ರಕರಣ ಎಸ್ಐಟಿಗೆ ನೀಡಬೇಕು: ಶಾಸಕ ಡಾ.ಸಿದ್ದಲಿಂಗಪ್ಪ</strong> </p><p>ಪಾಟೀಲ ಹಾಗೂ ಅವರ ಸಹೋದರರಿಂದ ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈಚೆಗೆ ಕಠಳ್ಳಿ ಗ್ರಾಮದ ಬಸವರಾಜ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯ ಪ್ರಮುಖ ಆರೋಪಿಗಳನ್ನು ಬಿಟ್ಟು ಬೇರೆ ಅವರಿಗೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಸಹ ಬಂಧಿಸುತ್ತಿಲ್ಲ. ಇನ್ನು ನಾಲ್ಕು ದಿನಗಳಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿ ಈ ಪ್ರಕರಣ ಎಸ್ಐಟಿಗೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.</p>.<p><strong>ಕಾರ್ಖಾನೆಗಳಿಂದ ಶಾಸಕರಿಗೆ ಹಣ ಫಿಕ್ಸಿಂಗ್:</strong> ಚುನಾವಣೆ ಸಂದರ್ಭದಲ್ಲಿ ಶಾಸಕರು ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಕೆಲವು ಕೆಮಿಕಲ್ ಕಾರ್ಖಾನೆಗಳು ಶಾಶ್ವತವಾಗಿ ಬಂದ್ ಮಾಡುತ್ತೇನೆ ಎಂದು ಹೇಳಿದ್ದರು. ಕೇವಲ ಎರಡ್ಮೂರು ತಿಂಗಳು ಅಷ್ಟೇ ಬಂದಾಗಿದ್ದ ಕಾರ್ಖಾನೆಗಳು ಈಗ ಮತ್ತೆ ಆರಂಭ ಆಗಿವೆ. ಈ ಹಿಂದೆ ನಡೆದ ಹುಮನಾಬಾದ್ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಇಲ್ಲಿಯ ಒಂದೊಂದು ಕಾರ್ಖಾನೆಗಳಿಂದ ₹2 ಲಕ್ಷವನ್ನು ಶಾಸಕರು ಪಡೆದುಕೊಂಡಿದ್ದಾರೆ ಎಂದು ರಾಜಶೇಖರ ಪಾಟೀಲ ಆರೋಪಿಸಿದರು.</p>.<p><strong>ತಪ್ಪು ಇಲ್ಲದಿದ್ದರೆ ಹೊರ ಬನ್ನಿ:</strong> ಕಠಳ್ಳಿಯ ಬಸವರಾಜ ಅವರಿಗೆ ನನ್ನ ಸಹೋದರರು ಹಲ್ಲೆ ಮಾಡಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ. ಹಲ್ಲೆ ಮಾಡದಿದ್ದರೆ ನಿಮ್ಮ ಸಹೋದರರಿಗೆ ಹೊರಗೆ ಓಡಾಡಲು ಹೇಳಿ. ಮತ್ತೆ ಏಕೆ ಪರಾರಿಯಾಗಿದ್ದಾರೆ. ಈ ಪ್ರಕರಣ ಆಗಿ 20ದಿನಗಳು ಕಳೆಯುತ್ತಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇವರ ಬಂಧನಕ್ಕೆ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.</p>.<p>ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಜಿ.ಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ರಮೇಶ ಡಾಕುಳಗಿ, ಬಾಬು ಟೈಗರ್, ಶ್ರೀಮಂತ ಪಾಟೀಲ ತಾಳಮಡಗಿ, ದತ್ತಕುಮಾರ ಚಿದ್ರಿ, ಅಣ್ಯೆಪ್ಪ ವರನಾಳ , ದಿಲೀಪ್ ಕುಮಾರ್ ಬಗದಲ್ಕರ್, ಓಂಕಾರ ತುಂಬಾ, ಅಫ್ಸರ್ ಮಿಯ್ಯಾ, ಉಮೇಶ್ ಜಮಗಿ, ವೀರಪ್ಪ ಧುಮ್ಮನಸೂರ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>