<p><strong>ಬಸವಕಲ್ಯಾಣ</strong>: ‘ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ ಅವರು, ದೀನ ದಲಿತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ‘ಹಿಂದುಳಿದವರ ರಾಜ’ ಎಂದೇ ಗುರುತಿಸಿಕೊಂಡಿದ್ದರು’ ಎಂದು ಶಿವಛತ್ರಪತಿ ಸ್ಮಾರಕ ಸಮಿತಿ ಕಾರ್ಯದರ್ಶಿ ಸತೀಶಕುಮಾರ ಮುಳೆ ಹೇಳಿದರು.</p>.<p>ನಗರದ ಜೀಜಾಮಾತಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸಿಇಟಿ ವಿದ್ಯಾರ್ಥಿಗಳ ಸನ್ಮಾನ ಹಾಗೂ ಶಾಹು ಮಹಾರಾಜ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘ಡಾ.ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ಸಹಾಯಗೈದರು. ದುರ್ಬಲ ವರ್ಗದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದರು. ಮೀಸಲಾತಿ ಕಲ್ಪಿಸಿದರು’ ಎಂದು ಹೇಳಿದರು.</p>.<p>ಪುಣೆಯ ಪಠ್ಯಪುಸ್ತಕ ರಚನೆ ಮತ್ತು ಸಂಶೋಧನಾ ಮಂಡಳಿ ಸದಸ್ಯ ಸುಧೀರ ಕಾಂಬಳೆ ಮಾತನಾಡಿ, ‘ಶಾಹು ಮಹಾರಾಜರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತಂದರು. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು’ ಎಂದು ಹೇಳಿದರು.</p>.<p>ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಮುಖಂಡರಾದ ಅರ್ಜುನ ಕನಕ, ಮನೋಹರ ಮೈಸೆ, ಎಂ.ಎಂ. ತಂಬಾಕೆ, ರಿತೇಶ ಸೂರ್ಯವಂಶಿ, ಪ್ರತಾಪ ಸೂರ್ಯವಂಶಿ, ಬಾಲಾಜಿ ಬಿರಾದಾರ, ಪ್ರಕಾಶ ದಾಡಗೆ, ಭರತ ಬರಮ್ದೆ ಮಾತನಾಡಿದರು.</p>.<p>ಬಟ್ಟೆ ಅಂಗಡಿ ಭಸ್ಮವಾಗಿ ಹಾನಿ ಅನುಭವಿಸಿದ ಸುನಿತಾ ಬಿರಾದಾರ ಅವರಿಗೆ ₹ 50 ಸಾವಿರ ಧನಸಹಾಯ ನೀಡಲಾಯಿತು.</p>.<p>ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಆಕಾಶ ಅವರಿಗೆ ಬಹುಮಾನ ವಿತರಿಸಲಾಯಿತು.</p>.<p>ಮೀರಾ ಸತೀಶಕುಮಾರ ಮುಳೆ, ಎಂ.ಕೆ.ಗಾದಗೆ, ರಮೇಶ ಬೆಜಗಂ, ದಿಲೀಪ ಶಿಂಧೆ, ಶಂಕರ ನಾಗದೆ, ದೀಪಕ ನಾಗದೆ, ವಾರೀಸ್ ಅಲಿ, ಸಂಭಾಜಿ ಜಗತಾಪ, ರಾಜಕುಮಾರ ಭೋಸ್ಲೆ, ಧನರಾಜ ರಾಜೋಳೆ, ದಯಾನಂದ ಸೂರ್ಯವಂಶಿ, ರಮೇಶ ಬಿರಾದಾರ, ವಿಶ್ವನಾಥ ಪಾರಶೆಟ್ಟೆ, ಅನಿತಾ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ ಅವರು, ದೀನ ದಲಿತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ‘ಹಿಂದುಳಿದವರ ರಾಜ’ ಎಂದೇ ಗುರುತಿಸಿಕೊಂಡಿದ್ದರು’ ಎಂದು ಶಿವಛತ್ರಪತಿ ಸ್ಮಾರಕ ಸಮಿತಿ ಕಾರ್ಯದರ್ಶಿ ಸತೀಶಕುಮಾರ ಮುಳೆ ಹೇಳಿದರು.</p>.<p>ನಗರದ ಜೀಜಾಮಾತಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸಿಇಟಿ ವಿದ್ಯಾರ್ಥಿಗಳ ಸನ್ಮಾನ ಹಾಗೂ ಶಾಹು ಮಹಾರಾಜ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘ಡಾ.ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ಸಹಾಯಗೈದರು. ದುರ್ಬಲ ವರ್ಗದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದರು. ಮೀಸಲಾತಿ ಕಲ್ಪಿಸಿದರು’ ಎಂದು ಹೇಳಿದರು.</p>.<p>ಪುಣೆಯ ಪಠ್ಯಪುಸ್ತಕ ರಚನೆ ಮತ್ತು ಸಂಶೋಧನಾ ಮಂಡಳಿ ಸದಸ್ಯ ಸುಧೀರ ಕಾಂಬಳೆ ಮಾತನಾಡಿ, ‘ಶಾಹು ಮಹಾರಾಜರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತಂದರು. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು’ ಎಂದು ಹೇಳಿದರು.</p>.<p>ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಮುಖಂಡರಾದ ಅರ್ಜುನ ಕನಕ, ಮನೋಹರ ಮೈಸೆ, ಎಂ.ಎಂ. ತಂಬಾಕೆ, ರಿತೇಶ ಸೂರ್ಯವಂಶಿ, ಪ್ರತಾಪ ಸೂರ್ಯವಂಶಿ, ಬಾಲಾಜಿ ಬಿರಾದಾರ, ಪ್ರಕಾಶ ದಾಡಗೆ, ಭರತ ಬರಮ್ದೆ ಮಾತನಾಡಿದರು.</p>.<p>ಬಟ್ಟೆ ಅಂಗಡಿ ಭಸ್ಮವಾಗಿ ಹಾನಿ ಅನುಭವಿಸಿದ ಸುನಿತಾ ಬಿರಾದಾರ ಅವರಿಗೆ ₹ 50 ಸಾವಿರ ಧನಸಹಾಯ ನೀಡಲಾಯಿತು.</p>.<p>ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಆಕಾಶ ಅವರಿಗೆ ಬಹುಮಾನ ವಿತರಿಸಲಾಯಿತು.</p>.<p>ಮೀರಾ ಸತೀಶಕುಮಾರ ಮುಳೆ, ಎಂ.ಕೆ.ಗಾದಗೆ, ರಮೇಶ ಬೆಜಗಂ, ದಿಲೀಪ ಶಿಂಧೆ, ಶಂಕರ ನಾಗದೆ, ದೀಪಕ ನಾಗದೆ, ವಾರೀಸ್ ಅಲಿ, ಸಂಭಾಜಿ ಜಗತಾಪ, ರಾಜಕುಮಾರ ಭೋಸ್ಲೆ, ಧನರಾಜ ರಾಜೋಳೆ, ದಯಾನಂದ ಸೂರ್ಯವಂಶಿ, ರಮೇಶ ಬಿರಾದಾರ, ವಿಶ್ವನಾಥ ಪಾರಶೆಟ್ಟೆ, ಅನಿತಾ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>