<p><strong>ಹೊನ್ನಿಕೇರಿ (ಜನವಾಡ):</strong> ಬೀದರ್- ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ಸಿದ್ಧೇಶ್ವರ ದೇಗುಲಕ್ಕೆ ಚಿತ್ತಾಕರ್ಷಕ ಮಹಾದ್ವಾರ ಸಿದ್ಧವಾಗಿದೆ. </p>.<p>ಸಂಪೂರ್ಣ ಭಕ್ತರ ದೇಣಿಗೆಯಿಂದಲೇ ಮಹಾದ್ವಾರ ನಿರ್ಮಿಸಿದ್ದು, ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.</p>.<p>ಮಹಾದ್ವಾರ 30 ಅಡಿ ಅಗಲ ಹಾಗೂ 30 ಅಡಿ ಎತ್ತರ ಇದೆ. ಕಂಬಗಳ ಮೇಲೆ ತಲಾ 5 ಅಡಿಯ 5 ಗೋಪುರಗಳಿವೆ ಎಂದು ಹೇಳುತ್ತಾರೆ ಮಹಾದ್ವಾರ ನಿರ್ಮಾಣದ ಪ್ರಮುಖರಲ್ಲೊಬ್ಬರಾದ ಮಳಚಾಪುರದ ಮುಖಂಡ ಸಂಗಮೇಶ ಪಾಟೀಲ. </p>.<p>ಮಹಾದ್ವಾರದ ಕಂಬಗಳ ಮೇಲೆ ಢಮರುವಿನೊಂದಿಗೆ ತ್ರಿಶೂಲ, ದ್ವಾರಪಾಲಕರ ಉಬ್ಬು ಚಿತ್ರ ಬಿಡಿಸಲಾಗಿದೆ. ಹಿಂದಿಯಲ್ಲಿ ‘ಓಂ' ಬರೆಯಲಾಗಿದೆ ಎಂದು ತಿಳಿಸುತ್ತಾರೆ.</p>.<p>ಮಹಾದ್ವಾರದ ಮೇಲುಗಡೆ ಶಿವಲಿಂಗ, ನಂದಿ, ಹುಲಿಯ ಮೂರ್ತಿಗಳಿವೆ ಎಂದು ಹೇಳುತ್ತಾರೆ.</p>.<p>ಜಿಲ್ಲೆಯ ಭಕ್ತರ ದೇಣಿಗೆ ಹಾಗೂ ಹೊನ್ನಿಕೇರಿ ಗ್ರಾಮಸ್ಥರ ಸಹಕಾರದಿಂದ ಮಹಾದ್ವಾರ, ಅದರ ಬಳಿ ಬಸ್ ತಂಗುದಾಣ, ಕಿರು ನೀರು ಟ್ಯಾಂಕ್ ನಿರ್ಮಿಸಲಾಗಿದೆ ಎಂದು ಪ್ರಮುಖರಾದ ಪ್ರೇಮಸಾಗರ್ ಪಾಟೀಲ ಮಳಚಾಪುರ, ಮಲ್ಲಿಕಾರ್ಜುನ ತಾಂಬಳ್ಳೆ ರುದನೂರು ಹಾಗೂ ಮಲ್ಲಿಕಾರ್ಜುನ ಕೋಟೆ ಕಪಲಾಪುರ ತಿಳಿಸುತ್ತಾರೆ.</p>.<div><blockquote>ಮಹಾದ್ವಾರಕ್ಕೆ ₹ 20 ಲಕ್ಷ ವೆಚ್ಚವಾಗಿದೆ. ಜುಲೈ 20 ಮತ್ತು 21 ರಂದು ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. </blockquote><span class="attribution">ಸಂಗಮೇಶ ಪಾಟೀಲ ಮಳಚಾಪುರದ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಿಕೇರಿ (ಜನವಾಡ):</strong> ಬೀದರ್- ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ಸಿದ್ಧೇಶ್ವರ ದೇಗುಲಕ್ಕೆ ಚಿತ್ತಾಕರ್ಷಕ ಮಹಾದ್ವಾರ ಸಿದ್ಧವಾಗಿದೆ. </p>.<p>ಸಂಪೂರ್ಣ ಭಕ್ತರ ದೇಣಿಗೆಯಿಂದಲೇ ಮಹಾದ್ವಾರ ನಿರ್ಮಿಸಿದ್ದು, ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.</p>.<p>ಮಹಾದ್ವಾರ 30 ಅಡಿ ಅಗಲ ಹಾಗೂ 30 ಅಡಿ ಎತ್ತರ ಇದೆ. ಕಂಬಗಳ ಮೇಲೆ ತಲಾ 5 ಅಡಿಯ 5 ಗೋಪುರಗಳಿವೆ ಎಂದು ಹೇಳುತ್ತಾರೆ ಮಹಾದ್ವಾರ ನಿರ್ಮಾಣದ ಪ್ರಮುಖರಲ್ಲೊಬ್ಬರಾದ ಮಳಚಾಪುರದ ಮುಖಂಡ ಸಂಗಮೇಶ ಪಾಟೀಲ. </p>.<p>ಮಹಾದ್ವಾರದ ಕಂಬಗಳ ಮೇಲೆ ಢಮರುವಿನೊಂದಿಗೆ ತ್ರಿಶೂಲ, ದ್ವಾರಪಾಲಕರ ಉಬ್ಬು ಚಿತ್ರ ಬಿಡಿಸಲಾಗಿದೆ. ಹಿಂದಿಯಲ್ಲಿ ‘ಓಂ' ಬರೆಯಲಾಗಿದೆ ಎಂದು ತಿಳಿಸುತ್ತಾರೆ.</p>.<p>ಮಹಾದ್ವಾರದ ಮೇಲುಗಡೆ ಶಿವಲಿಂಗ, ನಂದಿ, ಹುಲಿಯ ಮೂರ್ತಿಗಳಿವೆ ಎಂದು ಹೇಳುತ್ತಾರೆ.</p>.<p>ಜಿಲ್ಲೆಯ ಭಕ್ತರ ದೇಣಿಗೆ ಹಾಗೂ ಹೊನ್ನಿಕೇರಿ ಗ್ರಾಮಸ್ಥರ ಸಹಕಾರದಿಂದ ಮಹಾದ್ವಾರ, ಅದರ ಬಳಿ ಬಸ್ ತಂಗುದಾಣ, ಕಿರು ನೀರು ಟ್ಯಾಂಕ್ ನಿರ್ಮಿಸಲಾಗಿದೆ ಎಂದು ಪ್ರಮುಖರಾದ ಪ್ರೇಮಸಾಗರ್ ಪಾಟೀಲ ಮಳಚಾಪುರ, ಮಲ್ಲಿಕಾರ್ಜುನ ತಾಂಬಳ್ಳೆ ರುದನೂರು ಹಾಗೂ ಮಲ್ಲಿಕಾರ್ಜುನ ಕೋಟೆ ಕಪಲಾಪುರ ತಿಳಿಸುತ್ತಾರೆ.</p>.<div><blockquote>ಮಹಾದ್ವಾರಕ್ಕೆ ₹ 20 ಲಕ್ಷ ವೆಚ್ಚವಾಗಿದೆ. ಜುಲೈ 20 ಮತ್ತು 21 ರಂದು ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. </blockquote><span class="attribution">ಸಂಗಮೇಶ ಪಾಟೀಲ ಮಳಚಾಪುರದ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>