ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾಳ: ಬೆಂಕಿಗೆ ಜೋಳದ ಬಣವೆ ಭಸ್ಮ

Last Updated 7 ಜೂನ್ 2021, 2:59 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ಸೋನಾಳ ಗ್ರಾಮದ ಮುನೀರ ಅವರ ಹೊಲದಲ್ಲಿನ ಜೋಳ ಬಣವೆ ಭಾನುವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿದೆ.

‘ರೈತ ಮುನೀರ್ 4 ಕಿ.ಮೀ. ದೂರದ ಹೊರಂಡಿ ಗ್ರಾಮದಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜೋಳದ ಕಣಕಿ ತಂದು ಹೊಲದಲ್ಲಿ ಇಟ್ಟಿದ್ದರು. ಊಟ ಮಾಡಿದ ನಂತರ ಜೋಳದ ಬಣವಿ ಕೂಡಿಡೋಣ ಎಂದು ಮನೆಗೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿಯೇ ಬಣವಿಗೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದೆ’ ಎಂದು ಗ್ರಾಮದ ಮುಖಂಡ ಅಂಕುಶ ಅವರು ತಿಳಿಸಿದರು.

‘ಇದರಿಂದ ₹15 ಸಾವಿರ ನಷ್ಟವಾಗಿದೆ. ಸರ್ಕಾರ ಬಡ ರೈತ ಮುನೀರ ಅವರಿಗೆ ಪರಿಹಾರ ಒದಗಿಸಿಕೊಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT