ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹೈಕಮಾಂಡ್‌ ‘ಗ್ರೌಂಡ್‌ ರಿಯಾಲಿಟಿ’ ಸರ್ವೇ ಮಾಡಲಿ: ಸುಭಾಷ ಕಲ್ಲೂರ ಆಗ್ರಹ

Published : 28 ನವೆಂಬರ್ 2023, 16:16 IST
Last Updated : 28 ನವೆಂಬರ್ 2023, 16:16 IST
ಫಾಲೋ ಮಾಡಿ
Comments
‘ಆಕಾಂಕ್ಷಿಯೆಂದು ಹಕ್ಕಿನಿಂದ ಹೇಳುವೆ’
‘ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಆಕಾಂಕ್ಷಿಯೆಂದು ಹಕ್ಕಿನಿಂದ ಹೇಳುವೆ. ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಾಗುವುದು ನಿಜ. ಏನೇ ಇರಲಿ. ಬೀದರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲಬೇಕು. ಯಾರಿಗೆ ಟಿಕೆಟ್‌ ಕೊಟ್ಟರೂ ಅದಕ್ಕಾಗಿ ಶಕ್ತಿಮೀರಿ ಕೆಲಸ ಮಾಡುತ್ತೇವೆ’ ಎಂದು ಮುಖಂಡ ನಾಗರಾಜ ಕರ್ಪೂರ ಹೇಳಿದರು.
‘ಮೋದಿ ಅವಧಿಯಲ್ಲಿ ನಾವ್ಯಾಕೆ ಸಂಸದರಾಗಬಾರದು?’
‘ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ನಾವ್ಯಾಕೆ ಸಂಸದರಾಗಬಾರದು? ಅತ್ತರಷ್ಟೇ ಮಗುವಿಗೆ ತಾಯಿ ಹಾಲು ಕುಡಿಸುತ್ತಾಳೆ’ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ ಹೇಳಿದರು. ನಾವು ಭಗವಂತ ಖೂಬಾ ವಿರುದ್ಧ ಇಲ್ಲ. ಅವರನ್ನು ವಿರೋಧಿಸಿದರೆ ಪಕ್ಷವನ್ನು ವಿರೋಧಿಸಿದಂತೆ. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಮೇಲಿಂದ ಸೀನಿಯರ್‌ಗಳು. ಎಂಪಿ ಟಿಕೆಟ್‌ಗೆ ಕ್ಲೇಮ್‌ ಮಾಡುತ್ತಿದ್ದೇವೆ. ನಾವು ಎಂಟು ಜನರಷ್ಟೇ ಅಲ್ಲ. ಇನ್ನೂ ಹಲವು ಜನ ಆಕಾಂಕ್ಷಿಗಳಿದ್ದಾರೆ. ಆದರೆ ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುತ್ತೇವೆ. ನಮಗೆ ಕೊಟ್ಟು ನೋಡಿ ಎಂದು ಹೇಳುತ್ತಿದ್ದೇವೆ. ಬರುವ ದಿನಗಳಲ್ಲಿ ಸಭೆ ನಡೆಸಿ ಪಕ್ಷಕ್ಕೆ ಕೋರುತ್ತೇವೆ ಎಂದರು.
‘ಯಾರನ್ನು ಯಾವಾಗ ರಾಜ ಮಾಡುತ್ತಾರೊ ಗೊತ್ತಿಲ್ಲ’ ‌
‘ಬಿಜೆಪಿಯಲ್ಲಿ ಯಾರನ್ನು ಯಾವಾಗ ರಾಜ ಮಾಡುತ್ತಾರೋ ಗೊತ್ತಿಲ್ಲ’ ಎಂದು ಬಿಜೆಪಿ ಮುಖಂಡ ಪದ್ಮಾಕರ್‌ ಪಾಟೀಲ ಮಾರ್ಮಿಕವಾಗಿ ಹೇಳಿದರು. ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಂಎಲ್‌ಎ ಎಲೆಕ್ಷನ್‌ನಲ್ಲಿ ಸೋತಿದ್ದೇನೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಮರಾಠ ಸಮಾಜದವರಿಗೆ ಟಿಕೆಟ್‌ ಕೊಟ್ಟಿಲ್ಲ. ಬರುವ ಚುನಾವಣೆಯಲ್ಲಿ ಆ ಸಮಾಜಕ್ಕೆ ಸೇರಿದ ನನಗೆ ಟಿಕೆಟ್‌ ಕೊಡಬೇಕು. ನಾನು ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನಾನು ಪಕ್ಷಕ್ಕಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಭಗವಂತ ಖೂಬಾ ‘ಗಲತ್‌ ಆದ್ಮಿ’ ಅಲ್ಲ. ಆದರೆ ನಾನು ಆಕಾಂಕ್ಷಿಯಾಗಿರುವೆ ಎಂದರು. ಮುಖಂಡರಾದ ಚನ್ನಬಸವ ಬಳತೆ ನಂದಕುಮಾರ ಸಾಳುಂಕೆ ಬಾಲಾಜಿ ಮಾತನಾಡಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ. ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆಕಾಂಕ್ಷಿಗಳು ಎಂದು ಹೇಳಿದ ನಂತರ ನಾವು ಭಗವಂತ ಖೂಬಾ ವಿರುದ್ಧ ಅಲ್ಲ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT