‘ಯಾರನ್ನು ಯಾವಾಗ ರಾಜ ಮಾಡುತ್ತಾರೊ ಗೊತ್ತಿಲ್ಲ’
‘ಬಿಜೆಪಿಯಲ್ಲಿ ಯಾರನ್ನು ಯಾವಾಗ ರಾಜ ಮಾಡುತ್ತಾರೋ ಗೊತ್ತಿಲ್ಲ’ ಎಂದು ಬಿಜೆಪಿ ಮುಖಂಡ ಪದ್ಮಾಕರ್ ಪಾಟೀಲ ಮಾರ್ಮಿಕವಾಗಿ ಹೇಳಿದರು. ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಂಎಲ್ಎ ಎಲೆಕ್ಷನ್ನಲ್ಲಿ ಸೋತಿದ್ದೇನೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಮರಾಠ ಸಮಾಜದವರಿಗೆ ಟಿಕೆಟ್ ಕೊಟ್ಟಿಲ್ಲ. ಬರುವ ಚುನಾವಣೆಯಲ್ಲಿ ಆ ಸಮಾಜಕ್ಕೆ ಸೇರಿದ ನನಗೆ ಟಿಕೆಟ್ ಕೊಡಬೇಕು. ನಾನು ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನಾನು ಪಕ್ಷಕ್ಕಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಭಗವಂತ ಖೂಬಾ ‘ಗಲತ್ ಆದ್ಮಿ’ ಅಲ್ಲ. ಆದರೆ ನಾನು ಆಕಾಂಕ್ಷಿಯಾಗಿರುವೆ ಎಂದರು. ಮುಖಂಡರಾದ ಚನ್ನಬಸವ ಬಳತೆ ನಂದಕುಮಾರ ಸಾಳುಂಕೆ ಬಾಲಾಜಿ ಮಾತನಾಡಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆಕಾಂಕ್ಷಿಗಳು ಎಂದು ಹೇಳಿದ ನಂತರ ನಾವು ಭಗವಂತ ಖೂಬಾ ವಿರುದ್ಧ ಅಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.