ಬಸವಕಲ್ಯಾಣ: ತಾಲ್ಲೂಕಿನ ಮೋರಖಂಡಿಯಲ್ಲಿ ಬುಧವಾರ ಅನಧಿಕೃತವಾಗಿ ಸಂಗ್ರಹಿಸಿದ್ದ ₹3,20,000 ಮೌಲ್ಯದ ರಸಗೊಬ್ಬರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ.
ತಳಭೋಗ ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ₹43,000 ಮೌಲ್ಯದ ಕೀಟನಾಶಕ ವಶ ಪಡಿಸಿಕೊಳ್ಳಲಾಗಿದೆ.
ಜಾಗೃತ ದಳದವರಾದ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜೆ.ಅನ್ಸಾರಿ, ವೀರಶೆಟ್ಟಿ ರಾಠೋಡ, ಮಾರ್ಥಂಡ, ಕೈಲಾಸನಾಥ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ.