ವಚನ ವೈಭವ ಸಮಿತಿ ಬೆಳ್ಳಿ ಮಹೋತ್ಸವ

ಬೀದರ್: ಅಸಮಾನತೆಯಿಂದ ಸಮಾನತೆಯತ್ತ ಕರೆದೊಯ್ಯುವ ಮಹತ್ವದ ಕಾರ್ಯವನ್ನು ಶರಣರು ಮಾಡಿದ್ದಾರೆ ಎಂದು ವಚನ ವೈಭವ ಸಮಿತಿಯ ಅಧ್ಯಕ್ಷ ರೇವಣಪ್ಪ ಮೂಲಗೆ ಹೇಳಿದರು.
ನಗರದ ಮಹೇಶನಗರದಲ್ಲಿ ವಚನ ವೈಭವ ಸಮಿತಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಡಿಡಿಪಿಐ ಶಿವಕುಮಾರ ಸ್ವಾಮಿ, ಗುರುನಾಥ ಅಕ್ಕಣ್ಣ, ಬಸವ ಕೇಂದ್ರದ ಉಪಾಧ್ಯಕ್ಷ ಬಸಯ್ಯ ಹೀರೆಮಠ, ಸಮಿತಿಯ ಉಪಾಧ್ಯಕ್ಷ ಸಿದ್ರಾಮಪ್ಪ ಚಿಕ್ಕನಾಗಾವೆ, ಶಿವಶಂಕರ ಟೋಕರೆ, ಶಂಕ್ರಪ್ಪ ಬುಧೆರಾ ಮಾತನಾಡಿದರು.
ಹಾವಯ್ಯ ಸ್ವಾಮಿ, ವೀರಪ್ಪ ಜೀರಗೆ, ಶಿವಕುಮಾರ ಸಾಲಿ, ಶಿವಪುತ್ರಪ್ಪ ಪಾಟೀಲ, ವಿರಶೆಟ್ಟಿ ಚನ್ನಶೆಟ್ಟಿ ಇದ್ದರು. ಲಿಂಗಾರ್ತಿ ಅಲ್ಲಮಪ್ರಭು ನಾವಾದಗೆರೆ ಸ್ವಾಗತಿಸಿದರು. ವೈಜಿನಾಥ ಸಜ್ಜನ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.