<p><strong>ಖಟಕಚಿಂಚೋಳಿ: </strong>ಸಮೀಪದ ನೆಲವಾಡ ಗ್ರಾಮದ ಯುವ ರೈತ ರಾಜಕುಮಾರ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು ಖರ್ಚು ವೆಚ್ಚ ಹೋಗಿ ಸುಮಾರು ₹2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಪ್ರಕೃತಿ ವಿಕೋಪ, ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಳಿತ, ರೋಗ–ರುಜಿನಗಳ ಕಾಟ, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಕೃಷಿ ಕ್ಷೇತ್ರದಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಆದರೆ, ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಇವರು ಸಾಧ್ಯಮಾಡಿ ತೋರಿಸಿದ್ದಾರೆ.</p>.<p>‘ಲಾಕ್ಡೌನ್ ಸಮಯದಲ್ಲಿ ಟೊಮೆಟೊ ಬೆಲೆ ಸಂಪೂರ್ಣವಾಗಿ ಕುಸಿದಿತ್ತು. ಈಗ ಬೆಲೆ ಏರಿಕೆ ಕಾಣುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ’ ಎಂದು ರೈತ ರಾಜಕುಮಾರ ಸಂತಸ ವ್ಯಕ್ತಪಡಿಸುತ್ತಾರೆ.</p>.<p>‘ಸದ್ಯ ಎರಡು ಬಾರಿ ಟೊಮೆಟೊ ಫಸಲು ತೆಗೆಯಲಾಗಿದೆ. ಪ್ರತಿ ಬಾರಿಯೂ 20-25 ಕ್ಯಾರೆಟ್ ಟೊಮೆಟೊ ಇಳುವರಿ ಬರುತ್ತಿವೆ. ಪ್ರತಿ ಕ್ಯಾರೆಟ್ ₹400-500 ಮಾರಾಟವಾಗುತ್ತಿದೆ. ಮುಂದೆಯೂ ಇನ್ನು 20 ಬಾರಿ ಇಳುವರಿ ಬರುತ್ತದೆ’ ಎಂದು ರಾಜಕುಮಾರ ಹೇಳುತ್ತಾರೆ.</p>.<p>‘ಸದ್ಯ ಸೋಂಕು ಹರಡುವಿಕೆ ಕಡಿಮೆ ಆಗಿರುವುದರಿಂದ ಎಲ್ಲ ವ್ಯಾಪಾರ ವಹಿವಾಟು ಮುಕ್ತವಾಗಿ ಸಾಗುತ್ತಿದೆ. ಎಲ್ಲೆಡೆಯಿಂದ ಖರೀದಿಸುವ ವ್ಯಾಪಾರಿಗಳು ಸಹ ಮಾರುಕಟ್ಟೆಗೆ ಬರುತ್ತಿದ್ದಾರೆ. ಅಲ್ಲದೇ ಕೆಲ ವ್ಯಾಪಾರಿಗಳು ರೈತರ ಹೊಲಗದ್ದೆಗಳಿಗೆ ತೆರಳಿ ಖರೀದಿಸುತ್ತಿರುವುದರಿಂದ ನಷ್ಟವಾಗುತ್ತಿಲ್ಲ’ ಎನ್ನುತ್ತಾರೆ ಅವರು.</p>.<p>‘ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇ ಆಶ್ರಯಿಸಿ ಬೆಳೆಯುವುದಿಲ್ಲ. ಸದ್ಯ ಟೊಮೆಟೊ ಉತ್ತಮ ಆದಾಯ ನೀಡುತ್ತಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದನ್ನೂ ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಹೇಳುತ್ತಾರೆ.</p>.<p>‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ’ ಎಂಬುದು ಹಿರಿಯ ರೈತರ<br />ಅನುಭವದ ಮಾತಾಗಿದೆ.</p>.<p>‘ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಳೆ ಬೆಳೆಯಬೇಕು. ಒಂದೇ ಬೆಳೆಯ ಮೇಲೆ ಅವಲಂಬಿತರಾಗಬಾರದು. ವಿವಿಧ ಬಗೆಯ ಬೆಳೆ ಬೆಳೆದರೆ ನಷ್ಟವಾಗುವುದಿಲ್ಲ’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಟಕಚಿಂಚೋಳಿ: </strong>ಸಮೀಪದ ನೆಲವಾಡ ಗ್ರಾಮದ ಯುವ ರೈತ ರಾಜಕುಮಾರ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು ಖರ್ಚು ವೆಚ್ಚ ಹೋಗಿ ಸುಮಾರು ₹2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಪ್ರಕೃತಿ ವಿಕೋಪ, ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಳಿತ, ರೋಗ–ರುಜಿನಗಳ ಕಾಟ, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಕೃಷಿ ಕ್ಷೇತ್ರದಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಆದರೆ, ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಇವರು ಸಾಧ್ಯಮಾಡಿ ತೋರಿಸಿದ್ದಾರೆ.</p>.<p>‘ಲಾಕ್ಡೌನ್ ಸಮಯದಲ್ಲಿ ಟೊಮೆಟೊ ಬೆಲೆ ಸಂಪೂರ್ಣವಾಗಿ ಕುಸಿದಿತ್ತು. ಈಗ ಬೆಲೆ ಏರಿಕೆ ಕಾಣುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ’ ಎಂದು ರೈತ ರಾಜಕುಮಾರ ಸಂತಸ ವ್ಯಕ್ತಪಡಿಸುತ್ತಾರೆ.</p>.<p>‘ಸದ್ಯ ಎರಡು ಬಾರಿ ಟೊಮೆಟೊ ಫಸಲು ತೆಗೆಯಲಾಗಿದೆ. ಪ್ರತಿ ಬಾರಿಯೂ 20-25 ಕ್ಯಾರೆಟ್ ಟೊಮೆಟೊ ಇಳುವರಿ ಬರುತ್ತಿವೆ. ಪ್ರತಿ ಕ್ಯಾರೆಟ್ ₹400-500 ಮಾರಾಟವಾಗುತ್ತಿದೆ. ಮುಂದೆಯೂ ಇನ್ನು 20 ಬಾರಿ ಇಳುವರಿ ಬರುತ್ತದೆ’ ಎಂದು ರಾಜಕುಮಾರ ಹೇಳುತ್ತಾರೆ.</p>.<p>‘ಸದ್ಯ ಸೋಂಕು ಹರಡುವಿಕೆ ಕಡಿಮೆ ಆಗಿರುವುದರಿಂದ ಎಲ್ಲ ವ್ಯಾಪಾರ ವಹಿವಾಟು ಮುಕ್ತವಾಗಿ ಸಾಗುತ್ತಿದೆ. ಎಲ್ಲೆಡೆಯಿಂದ ಖರೀದಿಸುವ ವ್ಯಾಪಾರಿಗಳು ಸಹ ಮಾರುಕಟ್ಟೆಗೆ ಬರುತ್ತಿದ್ದಾರೆ. ಅಲ್ಲದೇ ಕೆಲ ವ್ಯಾಪಾರಿಗಳು ರೈತರ ಹೊಲಗದ್ದೆಗಳಿಗೆ ತೆರಳಿ ಖರೀದಿಸುತ್ತಿರುವುದರಿಂದ ನಷ್ಟವಾಗುತ್ತಿಲ್ಲ’ ಎನ್ನುತ್ತಾರೆ ಅವರು.</p>.<p>‘ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇ ಆಶ್ರಯಿಸಿ ಬೆಳೆಯುವುದಿಲ್ಲ. ಸದ್ಯ ಟೊಮೆಟೊ ಉತ್ತಮ ಆದಾಯ ನೀಡುತ್ತಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದನ್ನೂ ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಹೇಳುತ್ತಾರೆ.</p>.<p>‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ’ ಎಂಬುದು ಹಿರಿಯ ರೈತರ<br />ಅನುಭವದ ಮಾತಾಗಿದೆ.</p>.<p>‘ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಳೆ ಬೆಳೆಯಬೇಕು. ಒಂದೇ ಬೆಳೆಯ ಮೇಲೆ ಅವಲಂಬಿತರಾಗಬಾರದು. ವಿವಿಧ ಬಗೆಯ ಬೆಳೆ ಬೆಳೆದರೆ ನಷ್ಟವಾಗುವುದಿಲ್ಲ’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>