ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾವಿಯಲ್ಲಿ ಬೆಳಕು ಬಿಟ್ಟು ಪರಿಶೀಲಿಸಿದರು. ಯುವಕನ ಸುಳಿವು ಸಿಗಲಿಲ್ಲ. ಮಂಗಳವಾರ ಮೋಟಾರ್ ಮೂಲಕ ಬಾವಿಯಲ್ಲಿನ ನೀರನ್ನು ತೆಗೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಕೆಯಲ್ಲಿಲ್ಲದ ಈ ಬಾವಿಯಲ್ಲಿ ಸಾಕಷ್ಟು ಕಸ ಬೆಳೆದಿದ್ದು, ಹೂಳು ತುಂಬಿದ್ದರಿಂದ ಕಾರ್ಯಾಚರಣೆ ಅರ್ಧಕ್ಕೆ ಬಿಡಲಾಯಿತು.