ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮವರನ್ನು ಈ ಬಾರಿ ಸಿಎಂ ಮಾಡುತ್ತಾರೆ, ಮುಂದಿನ ಸಾರಿ ಮಾಡುತ್ತಾರೆ ಎಂದು ಆಸೆ ಪಡುತ್ತಲೇ ಇದ್ದೇವೆ. ಆದರೆ ಅವಕಾಶ ಕೊಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಹಾಗಿದ್ದರೆ ನಮ್ಮವರನ್ನು ಯಾವಾಗ ಮಾಡುತ್ತಾರೆ? ದಲಿತರು ಜೀತದಾಳುಗಳ ರೀತಿಯಲ್ಲಿ ಪ್ರತಿ ಬಾರಿ ಕಾಂಗ್ರೆಸ್ಗೆ ಮತ ಹಾಕುತ್ತಿದ್ದಾರೆ. ಆದರೆ, ಪಕ್ಷ ನಮ್ಮನ್ನು ಕೈ ಹಿಡಿಯಲಿಲ್ಲ. ಅಂತಹವರಿಗೆ ನಾವು ಮತ ಹಾಕಬೇಕೇ ಎಂದು ನಮ್ಮ ಜನರನ್ನೇ ಕೇಳಬೇಕಾಗಿದೆ’ ಎಂದರು.