<p><strong>ಯಳಂದೂರು:</strong> ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ವಿವಿಧ ವಿಶೇಷ ಉತ್ಸವಗಳು ಜರುಗಿದವು.</p>.<p>ದೀಪೋತ್ಸವ. ಪಲ್ಲಕ್ಕಿ ಉತ್ಸವ ಹಾಗೂ ಬ್ಯಾಟಮನೆ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.</p>.<p>ಮುಂಜಾನೆ ಮಾರ್ಗಶಿರ ಶುದ್ಧ ತದಿಗೆ ಮೂಲ ನಕ್ಷತ್ರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಕಲ್ಯಾಣಿಯಲ್ಲಿ ಮಿಂದು ಮಡಿಯುಟ್ಟು ದೇವಾಲಯಕ್ಕೆ ತೆರಳಿದರು.</p>.<p>ನಂತರ ರಂಗನಾಥನ ಬೆಳ್ಳಿ ದಂಡಕಹೊತ್ತು ಸೇವೆ ಪೂರೈಸಿದರು. ಈ ಸಮಯ ಮಂಗಳವಾದ್ಯ ಮೊಳಗಿಸಿ, ಅಗ್ನಿ ಸ್ತ್ರೋತ್ರ ಮಾಡಿ, ಉತ್ಸವ ಮೂರ್ತಿಗೆ ಹೂ ಹಾರಗಳನ್ನು ಅರ್ಪಿಸಲಾಯಿತು.</p>.<p>ಬೆಳಿಗ್ಗೆ ಕಲ್ಯಾಣಿ ತೀರ್ಥದಿಂದ ಪ್ರೋಕ್ಷಣೆ ಮಾಡಿ, ಸ್ವಾಮಿಗೆ ಮಂಗಳಾರತಿ ಬೆಳಗಿ, ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಈ ವೇಳೆ ದಾಸರು ಶಂಕನಾದ ಮೊಳಗಿಸಿ, ಜಾಗಟೆ ಬಾರಿಸಿ ಬ್ಯಾಟಮನೆ ಉತ್ಸವದಲ್ಲಿ ಪಾಲ್ಗೊಂಡರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಅಲಂಕಾರ ಪೂಜೆ ಕಣ್ತುಂಬಿಕೊಂಡರು.</p>.<p>‘ದೀಪಾವಳಿಯಿಂದ ವಿಷ್ಣು ದೀಪೋತ್ಸವ ತನಕ ದಿನನಿತ್ಯ ದೀಪ ಬೆಳಗಲಾಗುತ್ತದೆ. ಈ ವೇಳೆ ಭಕ್ತರು ಹರಿನಾಮ ಸ್ಮರಣೆ ಮಾಡಿ ಹಣತೆ ಬೆಳಗುತ್ತಾರೆ. ಹಣ್ಣು ಕಾಯಿ ಪೂಜೆ ನೆರವೇರಿಸುತ್ತಾರೆ’ ಎಂದು ದೇವಳ ಪಾರುಪತ್ತೆಗಾರ ರಾಜು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ವಿವಿಧ ವಿಶೇಷ ಉತ್ಸವಗಳು ಜರುಗಿದವು.</p>.<p>ದೀಪೋತ್ಸವ. ಪಲ್ಲಕ್ಕಿ ಉತ್ಸವ ಹಾಗೂ ಬ್ಯಾಟಮನೆ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.</p>.<p>ಮುಂಜಾನೆ ಮಾರ್ಗಶಿರ ಶುದ್ಧ ತದಿಗೆ ಮೂಲ ನಕ್ಷತ್ರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಕಲ್ಯಾಣಿಯಲ್ಲಿ ಮಿಂದು ಮಡಿಯುಟ್ಟು ದೇವಾಲಯಕ್ಕೆ ತೆರಳಿದರು.</p>.<p>ನಂತರ ರಂಗನಾಥನ ಬೆಳ್ಳಿ ದಂಡಕಹೊತ್ತು ಸೇವೆ ಪೂರೈಸಿದರು. ಈ ಸಮಯ ಮಂಗಳವಾದ್ಯ ಮೊಳಗಿಸಿ, ಅಗ್ನಿ ಸ್ತ್ರೋತ್ರ ಮಾಡಿ, ಉತ್ಸವ ಮೂರ್ತಿಗೆ ಹೂ ಹಾರಗಳನ್ನು ಅರ್ಪಿಸಲಾಯಿತು.</p>.<p>ಬೆಳಿಗ್ಗೆ ಕಲ್ಯಾಣಿ ತೀರ್ಥದಿಂದ ಪ್ರೋಕ್ಷಣೆ ಮಾಡಿ, ಸ್ವಾಮಿಗೆ ಮಂಗಳಾರತಿ ಬೆಳಗಿ, ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಈ ವೇಳೆ ದಾಸರು ಶಂಕನಾದ ಮೊಳಗಿಸಿ, ಜಾಗಟೆ ಬಾರಿಸಿ ಬ್ಯಾಟಮನೆ ಉತ್ಸವದಲ್ಲಿ ಪಾಲ್ಗೊಂಡರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಅಲಂಕಾರ ಪೂಜೆ ಕಣ್ತುಂಬಿಕೊಂಡರು.</p>.<p>‘ದೀಪಾವಳಿಯಿಂದ ವಿಷ್ಣು ದೀಪೋತ್ಸವ ತನಕ ದಿನನಿತ್ಯ ದೀಪ ಬೆಳಗಲಾಗುತ್ತದೆ. ಈ ವೇಳೆ ಭಕ್ತರು ಹರಿನಾಮ ಸ್ಮರಣೆ ಮಾಡಿ ಹಣತೆ ಬೆಳಗುತ್ತಾರೆ. ಹಣ್ಣು ಕಾಯಿ ಪೂಜೆ ನೆರವೇರಿಸುತ್ತಾರೆ’ ಎಂದು ದೇವಳ ಪಾರುಪತ್ತೆಗಾರ ರಾಜು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>